ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫರ್ನಾಂಡಿಸ್‌ಗೆ ಜಯ ಶ್ರೀಕೃಷ್ಣ ಪರಿಸರ ಸಮಿತಿ ಕಟಾಕ್ಷ

By Staff
|
Google Oneindia Kannada News

ಮಂಗಳೂರು : ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರಿಗೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಡಿಸೆಂಬರ್‌ 21ರಂದು ‘ಗೌರವ ಅರ್ಪಣೆ’ ಕಾಯಕ್ರಮವನ್ನು ಹಮ್ಮಿಕೊಂಡಿದೆ.

ಅಂದಹಾಗೆ-
ಫರ್ನಾಂಡಿಸ್‌ ಅವರನ್ನು ಶ್ರೀಕೃಷ್ಣ ಪರಿಸರ ಸಮಿತಿ ಸನ್ಮಾನಿಸುತ್ತಿರುವುದಾದರೂ ಏಕೆ ? ಸಮಿತಿಯ ಅಧ್ಯಕ್ಷ ಜಯಕೃಷ್ಣ ಎ.ಶೆಟ್ಟಿ ಕಾರಣಗಳನ್ನು ಪಟ್ಟಿ ಮಾಡುತ್ತಾರೆ :

  • ಪ್ರತಿಷ್ಠಿತ ಕೊಂಕಣ ರೈಲ್ವೆ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ಜಾರ್ಜ್‌ ಫರ್ನಾಂಡಿಸ್‌ ಅವರು ತಾವು ರೈಲ್ವೆ ಸಚಿವರಾಗಿದ್ದಾಗ ಸಕ್ರಿಯ ಹಾಗೂ ಪ್ರಾಮಾಣಿಕ ಪ್ರಯತ್ನ ನಡೆಸಿದರು.
  • ಕುದುರೆಮುಖ ಪ್ರಕರಣವನ್ನು ಕೈಗೆತ್ತಿಕೊಂಡ ಫರ್ನಾಂಡಿಸ್‌, ಸೂಕ್ತ ವಕಾಲತ್ತಿನ ಮೂಲಕ ಕುದುರೆಮುಖ ಕಂಪನಿಗೆ 20 ವರ್ಷಗಳ ಗುತ್ತಿಗೆ ಪರವಾನಿಗೆಯನ್ನು ಕೇಂದ್ರ ಸರ್ಕಾರ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಕರ್ನಾಟಕ ಸರ್ಕಾರ ಗುತ್ತಿಗೆ ಅವಧಿಯನ್ನು 5 ವರ್ಷಗಳಿಗೆ ಇಳಿಸುವಂತೆ ಸುಪ್ರಿಂಕೋರ್ಟ್‌ ಕಟ್ಟೆ ಹತ್ತಿದೆ.
  • ಕಳೆದ 12 ದಶಕಗಳಿಂದ ನೆನೆಗುದಿಯಲ್ಲಿರುವ ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕ ಪ್ರಕರಣ ಜೀವಗೊಳ್ಳುವುದರಲ್ಲೂ ಫರ್ನಾಂಡಿಸ್‌ ಅವರ ಪಾತ್ರ ನಿರ್ಣಾಯಕವಾದುದು.
- ಈ ಎಲ್ಲಾ ಕಾರಣಗಳಿಂದಾಗಿ ಜಾರ್ಜ್‌ ಫರ್ನಾಂಡಿಸ್‌ ಅವರಿಗೆ ‘ಗೌರವ ಅರ್ಪಣೆ’ ಎನ್ನುತ್ತಾರೆ ಜಯಕೃಷ್ಣ ಶೆಟ್ಟಿ. ನೀವು ಒಪ್ಪುತ್ತೀರಾ ?

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X