ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಫರ್ನಾಂಡಿಸ್ಗೆ ಜಯ ಶ್ರೀಕೃಷ್ಣ ಪರಿಸರ ಸಮಿತಿ ಕಟಾಕ್ಷ
ಮಂಗಳೂರು : ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಡಿಸೆಂಬರ್ 21ರಂದು ‘ಗೌರವ ಅರ್ಪಣೆ’ ಕಾಯಕ್ರಮವನ್ನು ಹಮ್ಮಿಕೊಂಡಿದೆ.
ಅಂದಹಾಗೆ-
ಫರ್ನಾಂಡಿಸ್
ಅವರನ್ನು
ಶ್ರೀಕೃಷ್ಣ
ಪರಿಸರ
ಸಮಿತಿ
ಸನ್ಮಾನಿಸುತ್ತಿರುವುದಾದರೂ
ಏಕೆ
?
ಸಮಿತಿಯ
ಅಧ್ಯಕ್ಷ
ಜಯಕೃಷ್ಣ
ಎ.ಶೆಟ್ಟಿ
ಕಾರಣಗಳನ್ನು
ಪಟ್ಟಿ
ಮಾಡುತ್ತಾರೆ
:
- ಪ್ರತಿಷ್ಠಿತ ಕೊಂಕಣ ರೈಲ್ವೆ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ತಾವು ರೈಲ್ವೆ ಸಚಿವರಾಗಿದ್ದಾಗ ಸಕ್ರಿಯ ಹಾಗೂ ಪ್ರಾಮಾಣಿಕ ಪ್ರಯತ್ನ ನಡೆಸಿದರು.
- ಕುದುರೆಮುಖ ಪ್ರಕರಣವನ್ನು ಕೈಗೆತ್ತಿಕೊಂಡ ಫರ್ನಾಂಡಿಸ್, ಸೂಕ್ತ ವಕಾಲತ್ತಿನ ಮೂಲಕ ಕುದುರೆಮುಖ ಕಂಪನಿಗೆ 20 ವರ್ಷಗಳ ಗುತ್ತಿಗೆ ಪರವಾನಿಗೆಯನ್ನು ಕೇಂದ್ರ ಸರ್ಕಾರ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಕರ್ನಾಟಕ ಸರ್ಕಾರ ಗುತ್ತಿಗೆ ಅವಧಿಯನ್ನು 5 ವರ್ಷಗಳಿಗೆ ಇಳಿಸುವಂತೆ ಸುಪ್ರಿಂಕೋರ್ಟ್ ಕಟ್ಟೆ ಹತ್ತಿದೆ.
- ಕಳೆದ 12 ದಶಕಗಳಿಂದ ನೆನೆಗುದಿಯಲ್ಲಿರುವ ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕ ಪ್ರಕರಣ ಜೀವಗೊಳ್ಳುವುದರಲ್ಲೂ ಫರ್ನಾಂಡಿಸ್ ಅವರ ಪಾತ್ರ ನಿರ್ಣಾಯಕವಾದುದು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Story first published: Tuesday, December 24, 2002, 5:30 [IST]