ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಐಟಿ.ಕಾಂ ಮೇಳಕ್ಕೂ ಕಲಾಂ ಅಜ್ಜ ಬರ್ತಾರೆ

By Staff
|
Google Oneindia Kannada News

ಮೈಸೂರು : ಡಿಸೆಂಬರ್‌ 27ರಂದು ಮೈಸೂರು ಐಟಿ.ಕಾಂ ಮೇಳವನ್ನು ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್‌ ಕಲಾಂ ಉದ್ಘಾಟಿಸಲಿದ್ದಾರೆ.

ಮೈಸೂರು ದಸರಾ ಪ್ರದರ್ಶನ ನಡೆಯುವ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಮೇಳ ನಡೆಯಲಿದ್ದು, ಮಾಹಿತಿ ತಂತ್ರಜ್ಞಾನ 150 ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಕಳೆದ ವರ್ಷ ನಡೆದ ಮೇಳಕ್ಕೆ 100 ಕಂಪನಿಗಳು ಹಾಗೂ 40 ಸಾವಿರ ವೀಕ್ಷಕರು ಬಂದಿದ್ದರು. ಈ ಬಾರಿ ಇದಕ್ಕೂ ಹೆಚ್ಚಿನ ಜನ ಭಾಗವಹಿಸುವ ನಿರೀಕ್ಷೆಯಿದೆ.

ಕಾವೇರಿ ಕಾವು ಈಗ ತಣ್ಣಗಾಗಿದ್ದು, ಈ ಮೇಳದ ಮೂಲಕ ಮೈಸೂರು ಪ್ರವಾಸೋದ್ಯಮಕ್ಕೂ ಒಳ್ಳೆಯದಾಗಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ವಿಶ್ವನಾಥ್‌ ಸುದ್ದಿಗಾರರಿಗೆ ಹೇಳಿದರು. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X