ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಉಗ್ರರಿಗೂ ನಾಗಪ್ಪ ಹತ್ಯೆಗೂ ಸಂಬಂಧ?

By Staff
|
Google Oneindia Kannada News

ಬೆಂಗಳೂರು : ನಗರದ ಫ್ರೇಜರ್‌ ಟೌನ್‌ನಲ್ಲಿ ಇತ್ತೀಚೆಗೆ ಬಂಧಿತರಾದ ತಮಿಳು ಉಗ್ರರಿಗೂ, ನಾಗಪ್ಪನವರ ಹತ್ಯೆಗೂ ಏನಾದರೂ ಸಂಬಂಧವಿದೆಯಾ?
ವೀರಪ್ಪನ್‌ ಹೇಳಿರುವ ಮಾಹಿತಿಯ ಜಾಡು ಹಿಡಿದು ಹೊರಟರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುತ್ತದೆ. ಬಂಧಿತ ಉಗ್ರರಿಗೂ ವೀರಪ್ಪನ್‌ಗೂ ನಂಟಿರುವುದು ವಿಚಾರಣೆಯಿಂದ ಪತ್ತೆಯಾಗಿದೆ ಎನ್ನುತ್ತಿದೆ ಪೊಲೀಸ್‌ ಮೂಲ. ಫ್ರೇಜರ್‌ ಟೌನಿನ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡ ಮುತ್ತುರಾಜ್‌ ಎಂಬ ಉಗ್ರ ತಮಿಳುನಾಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಅಲ್ಲಿನ ಎಸ್‌ಟಿಎಫ್‌ ಪಡೆಗೆ ವೀರಪ್ಪನ್‌ ನೆಲೆಯನ್ನು ತಿಳಿಸಿದ್ದಾನೆ ಎಂದು ಪೊಲೀಸ್‌ ವಲಯದಲ್ಲಿ ದಟ್ಟ ಸುದ್ದಿ ಹಬ್ಬಿದೆ.

ಯಾರೀ ಮುತ್ತುರಾಜ್‌? ಪೊಲೀಸರ ಪ್ರಕಾರ...
ಇವನೊಬ್ಬ ತಮಿಳು ಉಗ್ರ. ಶಸ್ತ್ರಾಸ್ತ್ರ ತಯಾರಿಕಾ ಜಾಲ ಹಾಗೂ ವೀರಪ್ಪನ್‌ಗೆ ಇವನು ಸೇತು. ವೀರಪ್ಪನ್‌ ಜೊತೆ ಕಾಡಿನಲ್ಲಿ ಹಾಗೂ ಉಗ್ರರ ಜೊತೆ ನಾಡಿನಲ್ಲಿ ಅಲೆಮಾರಿಯಾಗಿದ್ದ ಈತ, ರಾಜ್ಯೋತ್ಸವದ ದಿನ (ನ.1) ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರ ನಡೆಸಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. 1999ರಲ್ಲಿ ಮಾರಿಕುಪ್ಪಂನ ಫ್ಯಾಕ್ಟರಿಯಾಂದರ ಕಾವಲುಗಾರನಿಂದ ಕದ್ದೊಯ್ದ ಡಬಲ್‌ ಬ್ಯಾರಲ್‌ ಬಂದೂಕನ್ನು ಈತ ವೀರಪ್ಪನ್‌ಗೆ ತಲುಪಿಸಿದ್ದಾನೆ.

ಯಾರನ್ನಾದರೂ ಅಪಹರಿಸಲು ಹೋಗುವಾಗ ವೀರಪ್ಪನ್‌ ಜೊತೆಯಲ್ಲಿ ಮುತ್ತುರಾಜ್‌ ಇದ್ದೇ ಇರುತ್ತಾನೆ. ನಾಗಪ್ಪನವರನ್ನು ಅಪಹರಿಸಿದಾಗಲೂ ವೀರಪ್ಪನ್‌ ಜೊತೆಯಲ್ಲಿ ಮುತ್ತುರಾಜ್‌ ಇದ್ದ. ಈತ ತಮಿಳುನಾಡು ಪೊಲೀಸರಿಗೆ ಸಿಕ್ಕಿದ್ದೇ ವೀರಪ್ಪನ್‌ಗೆ ಹಿನ್ನಡೆಯಾಯಿತು.

ತಮಿಳುನಾಡು ಎಸ್‌ಟಿಎಫ್‌ ಈತನ ಬಾಯಿ ಬಿಡಿಸಿ, ವೀರಪ್ಪನ್‌ ನೆಲೆದಾಣವನ್ನು ಪತ್ತೆ ಮಾಡಿದ್ದಾರೆ. ನಂತರ ನಡೆದಿದೆ ಎನ್ನಲಾಗಿರುವ ದಾಳಿಯ ಕಾರಣ ನಾಗಪ್ಪ ಮೃತಪಟ್ಟಿರಬಹುದು. ಆದರೆ ನಾಗಪ್ಪನವರನ್ನು ಎಸ್‌ಟಿಎಫ್‌ ಪೊಲೀಸರು ಇಲ್ಲವಾಗಿಸಿದರೋ ಅಥವಾ ವೀರಪ್ಪನ್‌ ಕೊಂದನೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X