ಐಸಿಸಿ ತಾಕೀತನ್ನು ಕಡೆಗಣಿಸಿದ ಬಿಸಿಸಿಐ, ಮೊಹಾಲಿ ಟೆಸ್ಟ್ಗೆ ಶೆವಾಗ್
ಕೋಲ್ಕ್ಝತಾ : ಒಂದು ಪಂದ್ಯದ ನಿಷೇಧಕ್ಕೊಳಗಾಗಿರುವ ಭಾರತದ ಉದಯೋನ್ಮುಖ ಬ್ಯಾಟ್ಸ್ಮನ್ ವೀರೇಂದ್ರ ಶೆವಾಗ್ ಹೆಸರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವ 14 ಕ್ರಿಕೆಟಿಗರ ಪಟ್ಟಿಯಲ್ಲಿದೆ.
ಇಂಗ್ಲೆಂಡ್ನ ಮೈಕ್ ಡೆನ್ನಿಸ್ ಅವರ ಕೆಂಗಣ್ಣಿಗೆ ತುತ್ತಾದ ಭಾರತೀಯದ 6 ಕ್ರಿಕೆಟಿಗರ ಪೈಕಿ ಶೆವಾಗ್ ಕೂಡ ಒಬ್ಬರು. ಒಂದು ಪಂದ್ಯದಿಂದ ಇವರಿಗೆ ನಿಷೇಧ ಹೇರಲಾಗಿದೆ. ನೆಲಕ್ಕೆ ಪುಟಿದೆದ್ದ ಚೆಂಡನ್ನು ಕೈಗೆತ್ತಿಕೊಂಡು ಕ್ಯಾಚ್ಗೆ ಮನವಿ ಮಾಡಿದರೆಂಬ ಕಾರಣಕ್ಕೆ ಈ ಶಿಕ್ಷೆ. ದಕ್ಷಿಣ ಆಫ್ರಿಕ- ಭಾರತದ ನಡುವೆ ಮುಗಿದ ಮೂರನೇ ಟೆಸ್ಟ್ನಲ್ಲಿ ಶೆವಾಗ್ ಆಡಲಿಲ್ಲ. ಆದರೆ ಅದು ಅನಧಿಕೃತ ಪಂದ್ಯ ಎಂದು ಘೋಷಿತವಾಗಿದೆ. ಹೀಗಾಗಿ ಶೆವಾಗ್ ಅವರ ಮೇಲಿನ ನಿಷೇಧ ಇನ್ನೂ ಮುಗಿದಿಲ್ಲ ಎಂದು ಐಸಿಸಿ ಹೇಳಿದೆ. ಆತನನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಡಿಸುವ ನಿರ್ಧಾರವನ್ನು ಬರುವ ಶುಕ್ರವಾರ ಸಂಜೆಯಾಳಗೆ ಕೈಗೊಳ್ಳುವಂತೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗುವ ನಿರೀಕ್ಷೆಯಿದೆ. ಆಟಗಾರರನ್ನು ಅವರ ಸಾಮರ್ಥ್ಯದ ಆಧಾರದ ಮೇಲೆ ಆರಿಸಲಾಗಿದೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚಂದು ಬೋರ್ಡೆ ಬುಧವಾರ ಸುದ್ದಿಗಾರರಿಗೆ ಹೇಳಿದರು.
ವೇಗಿಗಳ ದಂಡಿಗೇ ಖೊಕ್ : ತಂಡದ ಆಯ್ಕೆಯಲ್ಲಿ ಬೆಚ್ಚಿ ಬೀಳಿಸಿರುವ ಸಂಗತಿಯೆಂದರೆ, ಅಜಿತ್ ಅಗರ್ಕರ್, ಆಶಿಶ್ ನೆಹ್ರ, ಜಹೀರ್ ಖಾನ್, ವೆಂಕಟೇಶ್ ಪ್ರಸಾದ್... ಇವರ್ಯಾರ ಹೆಸರುಗಳೂ ಇಲ್ಲ. ಗಾಯಾಳು ಎಂಬ ಕಾರಣಕ್ಕೆ ಶ್ರೀನಾಥ್ ಹೆಸರನ್ನು ಪರಿಗಣಿಸಿಲ್ಲ. ಈ ವೇಗಿಗಳ ಬದಲಿಗೆ ಕೇರಳದ ಟೀನು ಯಾಹಾನ್ನನ್, ರೈಲ್ವೇಸ್ನ ಸಂಜಯ್ ಬಂಗಾರ್ ಹಾಗೂ ಮಹಾರಾಷ್ಟ್ರದ ಇಕ್ಬಾಲ್ ಸಿದ್ದಿಕಿಗೆ ಅವಕಾಶ ನೀಡಲಾಗಿದೆ.
ತಂಡ ಹೀಗಿದೆ...
ಸೌರವ್ ಗಂಗೂಲಿ (ನಾಯಕ), ರಾಹುಲ್ ದ್ರಾವಿಡ್(ಉಪ ನಾಯಕ), ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಕಾನರ್ ವಿಲಿಯಮ್ಸ್, ಎಸ್.ಎಸ್.ದಾಸ್, ವೀರೇಂದ್ರ ಶೆವಾಗ್, ದೀಪ್ದಾಸ್ ಗುಪ್ತಾ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಟಿನ್ನು ಯಾಹಾನ್ನನ್, ಇಕ್ಬಾಲ್ ಸಿದ್ದಿಕಿ, ಶರಣ್ದೀಪ್ ಸಿಂಗ್, ಸಂಜಯ್ ಬಂಗಾರ್.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications