ಪಂಜೆ ಗ್ರಾಮದ ಬೋರ್ವೆಲ್ನಲ್ಲಿ ಕೆಂಪು ನೀರು, ಗ್ರಾಮಸ್ಥರು ಗಲಿಬಿಲಿ
ಮಂಗಳೂರು : ಕರಾವಳಿಯ ಹಲವು ಕಡೆಗಳಲ್ಲಿ ಬೋರ್ವೆಲ್ ಮೂಲಕ ಸಂಗ್ರಹಿಸಿದ ನೀರು ನೋಡುವುದಕ್ಕೆ ಸ್ವಚ್ಛವಾಗಿ ಸ್ಫಟಿಕದಂತೆ ಕಂಡರೂ ಬಿಸಿ ಮಾಡಿದ ತಕ್ಷಣ ಕೆಂಪು ಬಣ್ಣಕ್ಕೆ ತಿರುಗುತ್ತಿರುವುದಾಗಿ ವರದಿಯಾಗಿದೆ.
ಅಕ್ಕಿ ತೊಳೆದು ನೀರು ಬೆರೆಸಿ ಒಲೆ ಮೇಲಿಟ್ಟರೆ ಹತ್ತು ನಿಮಿಷ ವಾಗುತ್ತಲೇ ಆ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅನ್ನವೂ ಕೆಂಪು ಬಣ್ಣದ್ದಾಗಿರುತ್ತದೆ. ಬಣ್ಣ ಮಾತ್ರವಲ್ಲ, ಹೀಗೆ ಅಕ್ಕಿ ಬೆಂದು ಅನ್ನವಾಗುತ್ತಲೇ ಕೊಳೆತ ವಾಸನೆಯೂ ಬರಲಾರಂಭಿಸುತ್ತದೆ. ಪಾತ್ರೆಯ ಮೇಲ್ಭಾಗದಲ್ಲಿ ತೆಳ್ಳನೆಯ ಎಣ್ಣೆಯ ಪೊರೆಯೂ ನಿಂತಿರುತ್ತದೆ ಎಂದು ಪಂಜೆ ಗ್ರಾಮದ ನಿವಾಸಿಗಳು ಹೇಳುತ್ತಾರೆ.
ಇಲ್ಲಿನ ದೇವಸ್ಯ ಪಂಚಾಯತ್ನ ಅಂಗನವಾಡಿ ಮಕ್ಕಳು ಕೂಡ ಇಂತಹುದೇ ಬೋರ್ವೆಲ್ ನೀರನ್ನು ಬಳಸುತ್ತಿದ್ದು, ಕೆಲವು ಮಕ್ಕಳಿಗೆ ಚರ್ಮದ ಕಾಯಿಲೆಗಳೂ ಅಂಟಿಕೊಂಡಿರುವುದಾಗಿ ತಿಳಿದುಬಂದಿದೆ. ಸುಮಾರು ಶೇ 70ಕ್ಕೂ ಹೆಚ್ಚು ಮಂದಿ ದೇವಸ್ಯದ ನಿವಾಸಿಗಳು ಬೋರ್ವೆಲ್ ನೀರನ್ನೇ ಅವಲಂಬಿಲಸಿದ್ದಾರೆ. ಸ್ಥಳೀಯ ಗಡಿನಾಡ ಪ್ರಗತಿ ಯುವಕ ಮಂಡಲದ ಸದಸ್ಯರು ಕೆಂಪು ನೀರಿನ ಈ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪಂಜೆಯ ಪ್ರಾಥಮಿಕ ಆರೋಗ್ಯ ಕೇಂದ್ರವು ಕೆಂಪು ನೀರಾಗಿ ಬದಲಾಗುವ ಬೋರ್ವೆಲ್ ನೀರಿನ ಸ್ಯಾಂಪಲ್ನ್ನು ಪರೀಕ್ಷೆಗಾಗಿ ಕಳುಹಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...