ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು- ತಿರುವನಂತಪುರಂ ರೈಲಿಗೆಶುಕ್ರವಾರ ಹಸಿರು ನಿಶಾನೆ

By Staff
|
Google Oneindia Kannada News

ಮಂಗಳೂರು : ಕೇರಳ ಹಾಗೂ ಕರ್ನಾಟಕದ ಕರಾವಳಿಯ ನಡುವೆ ಸಂಪರ್ಕ ಕಲ್ಪಿಸುವ ಮಂಗಳೂರು- ತಿರುವನಂತಪುರಂ ನೇರ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸಲಿದೆ.

ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಒ.ರಾಜಗೋಪಾಲ್‌ ಶುಕ್ರವಾರ ಬಾವುಟ ಬೀಸುವ ಮೂಲಕ ಹೊಸ ರೈಲಿಗೆ ಹಸುರು ನಿಶಾನೆ ತೋರುವರು. ಮಂಗಳೂರು- ತಿರುವನಂತಪುರಂ ಜನರಿಗೆ ಈ ರೈಲು ದೀಪಾವಳಿ ಕೊಡುಗೆಯಾಗಿದ್ದು , ವಾರಕ್ಕೊಂದಾವರ್ತಿ ಸಂಚರಿಸಲಿದೆ ಎಂದು ಸ್ಟೇಷನ್‌ ಸೂಪರಿಟೆಂಡೆಂಟ್‌ ಗುರುವಾರ ಪಿಟಿಐ ಪ್ರತಿನಿಧಿಗೆ ತಿಳಿಸಿದ್ದಾರೆ.

ಹೊಸ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸುತ್ತಿದ್ದರೂ, ಬುಕ್ಕಿಂಗ್‌ ಒಂದು ವಾರದ ಹಿಂದೆಯೇ ಪ್ರಾರಂಭವಾಗಿದೆ ಎಂದು ಸೂಪರಿಟೆಂಡೆಂಟ್‌ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X