ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು- ತಿರುವನಂತಪುರಂ ರೈಲಿಗೆಶುಕ್ರವಾರ ಹಸಿರು ನಿಶಾನೆ
ಮಂಗಳೂರು : ಕೇರಳ ಹಾಗೂ ಕರ್ನಾಟಕದ ಕರಾವಳಿಯ ನಡುವೆ ಸಂಪರ್ಕ ಕಲ್ಪಿಸುವ ಮಂಗಳೂರು- ತಿರುವನಂತಪುರಂ ನೇರ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸಲಿದೆ.
ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಒ.ರಾಜಗೋಪಾಲ್ ಶುಕ್ರವಾರ ಬಾವುಟ ಬೀಸುವ ಮೂಲಕ ಹೊಸ ರೈಲಿಗೆ ಹಸುರು ನಿಶಾನೆ ತೋರುವರು. ಮಂಗಳೂರು- ತಿರುವನಂತಪುರಂ ಜನರಿಗೆ ಈ ರೈಲು ದೀಪಾವಳಿ ಕೊಡುಗೆಯಾಗಿದ್ದು , ವಾರಕ್ಕೊಂದಾವರ್ತಿ ಸಂಚರಿಸಲಿದೆ ಎಂದು ಸ್ಟೇಷನ್ ಸೂಪರಿಟೆಂಡೆಂಟ್ ಗುರುವಾರ ಪಿಟಿಐ ಪ್ರತಿನಿಧಿಗೆ ತಿಳಿಸಿದ್ದಾರೆ.
ಹೊಸ ರೈಲು ಶುಕ್ರವಾರದಿಂದ ತನ್ನ ಸಂಚಾರ ಪ್ರಾರಂಭಿಸುತ್ತಿದ್ದರೂ, ಬುಕ್ಕಿಂಗ್ ಒಂದು ವಾರದ ಹಿಂದೆಯೇ ಪ್ರಾರಂಭವಾಗಿದೆ ಎಂದು ಸೂಪರಿಟೆಂಡೆಂಟ್ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, November 15, 2001, 5:30 [IST]