ಗಾಯತ್ರಿನಗರ, ಅರಮನೆ ನಗರದಲ್ಲಿ ಮರುಮತದಾನ ಆರಂಭ
ಬೆಂಗಳೂರು : ಕಣದಲ್ಲಿರುವ ಅಭ್ಯರ್ಥಿಗಳ ಕ್ರಮಸಂಖ್ಯೆ ತಪ್ಪಾಗಿ ಮುದ್ರಣವಾಗಿದ್ದ ಹಿನ್ನೆಲೆಯಲ್ಲಿ ಗಾಯತ್ರಿನಗರ ವಾರ್ಡ್ನ ಎಲ್ಲಾ ಹಾಗೂ ಮತಪೆಟ್ಟಿಗೆ ಅಪಹರಣ ನಡೆದಿದ್ದ ಅರಮನೆ ನಗರದ ಕೆಲವು ಮತಗಟ್ಟೆಗಳಲ್ಲಿ ಗುರುವಾರ ಮತದಾನ ಆರಂಭವಾಗಿದೆ.
ನವೆಂಬರ್ 11ರಂದು ನಡೆದ ಚುನಾವಣೆಯಲ್ಲಿ ಮತಗಟ್ಟೆ ಅಪಹರಣ ನಡೆದಿದ್ದ ಅರಮನೆ ನಗರದ ವಾರ್ಡ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್ ತಿಳಿಸಿದ್ದಾರೆ. ಈಹೊತ್ತು ಈ ಎರಡೂ ವಾರ್ಡ್ಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.
ಈ ಎರಡು ವಾರ್ಡ್ಗಳ ಮತ ಎಣಿಕೆ ಕಾರ್ಯ ಗುರುವಾರ ಸಂಜೆ 6 ಗಂಟೆಗೆ ಆರಂಭವಾಗಲಿದ್ದು, ರಾತ್ರಿಯ ವೇಳೆಗೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೆರಡು ಸ್ಥಾನ ಕಾಂಗ್ರೆಸ್ಗೆ: ಇದಕ್ಕೂ ಮುನ್ನ ನವೆಂಬರ್ 13ರಂದು ಮಹಾನಗರ ಪಾಲಿಕೆಯ 4 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದೆರಡು ಸ್ಥಾನಗಳು ಜಾತ್ಯತೀತ ಜನತಾದಳ ಹಾಗೂ ಪಕ್ಷೇತರರ ಪಾಲಾಗಿದೆ. ಈ ವಿಜಯದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಬಲ 56ಕ್ಕೇರಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...