ದೇಶಭಕ್ತಿ ಬಿತ್ತುವ ಕನಸಿನೊಂದಿಗೆ ಎಪಿಜೆ ಕಲಮ್ ಬೆಂಗಳೂರಿಗೆ!
ಬೆಂಗಳೂರು : ಹಿರಿಯ ವಿಜ್ಞಾನಿ ಹಾಗೂ ಭಾರತ ರತ್ನ ಪ್ರಶಸ್ತಿ ವಿಜೇತ ಡಾ. ಎಪಿಜೆ ಅಬುಲ್ ಕಲಮ್ ಅವರ ದೆಹಲಿ ವಾಸ ಮುಗಿದಂತಿದೆ. ಭಾರತ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಅವರದು ಸೋಮವಾರ ಕೊನೆಯ ದಿನ. ಮುಂದೇನು ಅಂತ ಕೇಳಿದರೆ, ಕಲಮ್ ಏನಂತಾರೆ ಗೊತ್ತಾ- ನೇರ ಬೆಂಗಳೂರಿಗೆ ಹೋಗುತ್ತೇನೆ. ಇನ್ನು ಮೇಲೆ ಅಲ್ಲೇ ನನ್ನ ಮನೆ. ಬೆಂಗಳೂರಿನ ಬಗೆಗೆ ಅದೆಷ್ಟೋ ಸಿಹಿ ನೆನಪುಗಳು ಎದೆಯಲ್ಲಿವೆ ಗೊತ್ತಾ ...
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯನ್ಸ್ನ ವಿಶೇಷ ಪ್ರೊಫೆಸರ್ ಆಗಿ ಕೆಲಸ ಮಾಡುವುದೂ ನನಗೆ ಖುಷಿಯ ವಿಷಯ. ಇನ್ನೊಂದು ಮುಖ್ಯ ವಿಷಯವೆಂದರೆ ಅಲ್ಲಿನ ಡಾ. ಬ್ರಹ್ಮ ಪ್ರಕಾಶ್ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪೀಠದ ಮುಖ್ಯಸ್ಥನಾಗುವುದು. ‘ಬ್ರಹ್ಮ ಪ್ರಕಾಶರೇ ನನ್ನ ಗುರುಗಳು ! ’ ಎಂದು ಟೆಲಿಫೋನ್ ಸಂದರ್ಶನವೊಂದರಲ್ಲಿ ಅಬುಲ್ ಕಲಮ್ ಭಾವುಕರಾಗಿ ಹೇಳಿದ್ದಾರೆ.
‘ಬದುಕಿನ ಇನ್ನುಳಿದ ಸಮಯವನ್ನು ಭಾರತೀಯ ಯುವಜನತೆಗಾಗಿ ವ್ಯಯಿಸುತ್ತೇನೆ. ಅವರಲ್ಲಿ ದೇಶದ ಬಗ್ಗೆ ಪ್ರೇಮ, ದೇಶಭಕ್ತಿ ಬೆಳೆಯಬೇಕು. ಮಾರ್ಗದರ್ಶನ ನೀಡಬೇಕು. ಅವರ ಕನಸುಗಳು ಭಗ್ನವಾಗಬಾರದು’ ಎನ್ನುವ ಕಲಮ್ ಅವರು, 1957ರಲ್ಲಿ ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ನಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಬಾಹ್ಯಾಕಾಶ, ಕ್ಷಿಪಣಿ ತಂತ್ರಜ್ಞಾನ, ಪರಮಾಣು ವಿಜ್ಞಾನ ಮತ್ತು ಯುದ್ಧ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಯುವಜನತೆಯಾಂದಿಗೆ ಹಂಚಿಕೊಳ್ಳಲು ಅವರು ಇಷ್ಟಪಡುತ್ತಾರೆ. ಇದರಿಂದ ಭಾರತ ಸಶಕ್ತ ದೇಶ ಎಂಬುದನ್ನು ಯುವಜನತೆಗೂ ಮನವರಿಕೆಯಾಗುತ್ತದೆ ಎಂಬುದು ಕಲಮ್ ನಂಬಿಕೆ.
ಸರತಿ ಸಾಲಿನಲ್ಲೇ ಟಿಕೇಟು ಕೊಳ್ಳುವ ಭಾರತ ರತ್ನ
ಯಾವ ಕಾರ್ಯಕ್ರಮವೇ ಆಗಲೀ, ಭಾಷಣ ಮುಗಿಸಿಕೊಂಡು ಬರುವಾಗ ಕೈತುಂಬ ಹಣ್ಣು ಹೂಮಾಲೆಗಳನ್ನು ಹಿಡಿದುಕೊಂಡು ಬರುವ ಈ ವಿಜ್ಞಾನಿ ಅವನ್ನೆಲ್ಲ ಕಾರ್ ಡ್ರೆೃವರಿಗೆ ಕೊಟ್ಟು ಬಿಡುತ್ತಿದ್ದರು. ತಮಗೆ ಭಾರತ ರತ್ನ ಘೋಷಣೆಯಾದಾಗ ಕಲಮ್ ತನಗೆ ಹೂಮಾಲೆಗಳನ್ನು ಅರ್ಪಿಸಬಾರದು ಅಂತ ಒಂದು ಸರ್ಕ್ಯುಲರನ್ನೇ ಹೊರಡಿಸಿದ್ದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿಯೇ ನಿಂತು ಟಿಕೇಟು ಕೊಳ್ಳುತ್ತಿದ್ದರು.
ದೇಶದ ಯುವಜನತೆಯ ಬಗ್ಗೆ ಅಪಾರ ಭರವಸೆಯನ್ನು ಇಟ್ಟುಕೊಂಡಿರುವ ಈ ವಿಜ್ಞಾನಿ- ನಮ್ಮ ದೇಶದ ಹಿರಿಮೆಯನ್ನು ತಿಳಿ ಹೇಳುವ ಕನಸು ಹೊತ್ತು ಬೆಂಗಳೂರಿಗೆ ಬರುಲಿದ್ದಾರೆ. ಕಲಮ್ ಹಿಂದೊಮ್ಮೆ ಹೇಳಿದ್ದರು : Dream, dream, dream; dream transfroms into thought. And thoughts result in action.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications