ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂದಾಪುರ: ಜುಮ್ಮಾ ಮಸೀದಿ ಜೀರ್ಣೋದ್ಧಾರ ಕಾರ್ಯ ಪೂರ್ಣ

By Staff
|
Google Oneindia Kannada News

ಕುಂದಾಪುರ: ಇಲ್ಲಿನ ಗುಲ್ವಾಡಿಯಲ್ಲಿ ಮೆಹರಾಜ್‌ ಜುಮ್ಮಾ ಮಸೀದಿಯ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದ್ದು , ನವೆಂಬರ್‌ 12ರಂದು ಹೊಸ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.

ಸುಮಾರು ಮೂರು ದಶಕಗಳಿಗೂ ಹಿಂದೆ ಸಣ್ಣ ಕಟ್ಟಡವೊಂದರಲ್ಲಿ ಆರಂಭವಾದ ಈ ಮಸೀದಿಯು ಕುಸಿದು ಬೀಳುವ ಮಟ್ಟದಲ್ಲಿದ್ದುದರಿಂದ ಪುನರ್ರಚನೆ ಕಾರ್ಯವನ್ನು ಊರಿನವರ ಸರಕಾರದಿಂದ ಕೈಗೆತ್ತಿಕೊಳ್ಳಲಾಯಿತು. ಗುಲ್ವಾಡಿಯ ಸುಮಾರು 105 ಮನೆಗಳಿಗೆ ಈ ಮಸೀದಿಯ ಅಗತ್ಯವಿದ್ದು , 12 ಲಕ್ಷರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಮುಗಿದಿದೆ.

ಉದ್ಘಾಟನೆಯ ಪ್ರಯುಕ್ತ ಕಾರ್ಯಕ್ರಮಗಳು ನವೆಂಬರ್‌ ಏಳರಿಂದಲೇ ಆರಂಭವಾಗಲಿವೆ. ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ಮಸೀದಿಯ ಮೈದಾನದಲ್ಲಿ ಧಾರ್ಮಿಕ ಉಪನ್ಯಾಸವನ್ನು ಆಯೋಜಿಸಲಾಗಿದೆ. 12ರಂದು ಜನಾಬ್‌ ಸೈಯದ್‌ ಕೆ.ಎಸ್‌. ಅಟಕೋಯ ತಂಙಳ್‌ ಕುಂಬೋಳ್‌ ಅವರು ಮಸೀದಿಯನ್ನು ಉದ್ಘಾಟಿಸುತ್ತಾರೆ.

(ಇನ್ಫೋ ವಾರ್ತೆ)

What do you think about this ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X