ದಸರೆ ಸರಳಾತಿ ಸರಳ, ಕೆಎಸ್ಆರ್ಟಿಸಿಗೊ ಭರ್ಜರಿ ಆದಾಯ
ಬೆಂಗಳೂರು: ನಾಡಹಬ್ಬ ದಸರಾ ಸಂದರ್ಭದಲ್ಲಿ ಕಲ್ಪಿಸಿದ್ದ ವಿಶೇಷ ಬಸ್ ಸಂಚಾರ ಸೇವೆಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) 95 ಲಕ್ಷ ರುಪಾಯಿ ಲಾಭ ಗಳಿಸಿದೆ.
ದಸರೆ ಪ್ರಯುಕ್ತ ತಿರುಪತಿ, ಧರ್ಮಸ್ಥಳ, ಮಂಗಳೂರು, ಕುಕ್ಕೆ, ಹೊರನಾಡು, ಶೃಂಗೇರಿ, ಕುಂದಾಪುರ, ಕುಮಟಾ, ಮಡಿಕೇರಿ, ಮೈಸೂರು ಮುಂತಾದ ಸ್ಥಳಗಳಿಂದ ಮೈಸೂರಿಗೆ 250 ಕ್ಕೂ ಹೆಚ್ಚು ವಿಶೇಷ ಬಸ್ಗಳ ಸಂಚಾರ ಸೌಲಭ್ಯವನ್ನು ಕೆಎಸ್ಆರ್ಟಿಸಿ ಒದಗಿಸಿತ್ತು . ಮೈಸೂರಿನಿಂದ ಚಾಮುಂಡಿ ಬೆಟ್ಟ , ಕನ್ನಂಬಾಡಿ, ಚಾಮುಂಡಿ ಬೆಟ್ಟಕ್ಕೂ ಕೆಎಸ್ಆರ್ಟಿಸಿ ವಿಶೇಷ ಬಸ್ ಸಂಚಾರವನ್ನು ಕಲ್ಪಿಸಿತ್ತು .
ಟಿಕೇಟ್ ಕಾಯ್ದಿರಿಸುವಿಕೆ ಜಾಲ ವಿಸ್ತರಣೆ
ಗಣಕೀಕೃತ ಮುಂಗಡ ಟಿಕೇಟ್ ಕಾಯ್ದಿರಿಸುವಿಕೆ ಜಾಲವನ್ನು ಪ್ರಸಕ್ತ ವರ್ಷದಲ್ಲಿ 27 ಸ್ಥಳಗಳಿಗೆ ವಿಸ್ತರಿಸಲಾಗಿದ್ದು , ಶೀಘ್ರದಲ್ಲಿಯೇ ಈ ಜಾಲವನ್ನು ಜಿಲ್ಲಾ- ತಾಲ್ಲೂಕು ಕೇಂದ್ರಗಳು ಸೇರಿದಂತೆ 100 ಸ್ಥಳಗಳಿಗೆ ವಿಸ್ತರಿಸಲಾಗುವುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಗಣಕೀಕೃತ ಮುಂಗಡ ಟಿಕೇಟು ಕಾಯ್ದಿರಿಸುವಿಕೆ ಸಂಬಂಧ ಹೆಚ್ಚಿನ ವಿವರಗಳನ್ನು ಪಡೆಯಲು ಬಯಸುವವರು 98440-41723 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)