ಬೀಡಾಡಿ ದನ ಕಟ್ಟಲು ಹೋದ ಪೊಲೀಸ್ ಪೇದೆಗೆ ಒದೆತ
ಬೆಂಗಳೂರು: ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ಆದೇಶದ ಮೇರೆಗೆ ಜಾನುವಾರುಗಳನ್ನು ಹಿಡಿಯುವ ಪೊಲೀಸರ ಕೆಲಸ ಪ್ರಗತಿಯಲ್ಲಿರುವಂತೆಯೇ- ಜಾನುವಾರುಗಳನ್ನು ಹಿಡಿಯುವ ಹೆಚ್ಚುವರಿ ಕೆಲಸದ ಬಗ್ಗೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾಂಗ್ಲಿಯಾನ ನಿಲುವಿಗೆ ಗೋಮಾಲೀಕರ ಪ್ರತಿಭಟನೆಯೂ ವ್ಯಕ್ತವಾಗಿದೆ. ಪೊಲೀಸ್ ಪೇದೆಯಾಬ್ಬ ದನದ ಒದೆತದಿಂದ ಗಾಯಗೊಂಡಿರುವುದು ಇನ್ನೊಂದು ವಿಶೇಷ.
ಬೀದಿಗಳಲ್ಲಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ಜಾನುವಾರುಗಳನ್ನು ಪೊಲೀಸರು ಬಂಧಿಸಿದ್ದು , ಇದರಿಂದಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ 10 ಸಾವಿರ ರುಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಈ ನಡುವೆ ಕೋರಮಂಗಲ ಪೊಲೀಸರು ದನಗಳನ್ನು ಹಿಡಿದಿದ್ದರಿಂದ ದನಗಳ ಮಾಲಿಕರು ಪೊಲೀಸ್ ಠಾಣೆಯ ಎದುರು ಧರಣಿ ನಡೆಸಿದ ಘಟನೆಯೂ ವರದಿಯಾಗಿದೆ.
ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದ ಕೆಲವು ದನಗಳನ್ನು ಆಡುಗೋಡಿ ಪೊಲೀಸರು ಹಿಡಿದಿದ್ದು , ಈ ದನಗಳನ್ನು ಕಟ್ಟಿ ಹಾಕುವಾಗ, ದನವೊಂದು ಕಾಲಿನಿಂದ ಜಾಡಿಸಿದ್ದರಿಂದ ಪೊಲೀಸ್ ಪೇದೆಯಾಬ್ಬರು ಗಾಯಗೊಂಡಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಸಾಂಗ್ಲಿಯಾನ
ವಾಚ್