ಗೋಪಾಲಕರಾದರಯ್ಯ ಬೆಂಗಳೂರು ಮಹಾನಗರದ ಪೊಲೀಸರು !
ಬೆಂಗಳೂರು : ನಗರ ಪೊಲೀಸರು ಪೂಜೆಯನ್ನೂ ಮಾಡಬಾರದು, ನಿದ್ದೆಯನ್ನೂ ಮಾಡಬಾರದು! ಎಂದು ನೂತನ ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ಅವರು ಹೊರಡಿಸಿರುವ ಅಪ್ಪಣೆಯಲ್ಲಿ ಎರಡನೇ ಭಾಗ ಹೆಚ್ಚೂ ಕಡಿಮೆ ಅನುಷ್ಠಾನಕ್ಕೆ ಬಂದಿದೆ.
ಹೆಂಡತಿ ಮಕ್ಕಳ ಶಾಪವನ್ನೂ ಲೆಕ್ಕಿಸದೆ ನಗರ ಪೊಲೀಸರು ಕಳೆದೆರಡು ರಾತ್ರಿಗಳಲ್ಲಿ ಬೀದಿಗಿಳಿದಿದ್ದಾರೆ. ಈಗಿನ ಕಳ್ಳಕಾಕರು ಕಳವಿಗಾಗಿ ರಾತ್ರಿ ವೇಳೆಯನ್ನೇ ಅವಲಂಬಿಸಿಲ್ಲವಾದ್ದರಿಂದ ಪೊಲೀಸರೇನೂ ಕಳ್ಳಕಾಕರ ಬೆನ್ನು ಬಿದ್ದಿಲ್ಲ . ಬದಲಿಗೆ ಮೂಗುದಾರವಿಲ್ಲದೆ ಅಲೆಯುತ್ತಿರುವ ಬಿಡಾಡಿ ಜಾನುವಾರಗಳನ್ನು ಬೆನ್ನಟ್ಟಿ ಹಿಡಿಯುತ್ತಿದ್ದಾರೆ. ಹಿಡಿಯಲೇಬೇಕು, ಸಾಂಗ್ಲಿಯಾನ ದಂಡ ಹಿಡಿದಿದ್ದಾರೆ.
ಕೊರಳಪಟ್ಟಿ ಇಲ್ಲದೆ ಅಡ್ಡಾಡುವ ನಾಯಿಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಹಿಡಿದು ವ್ಯಾನಲ್ಲಿ ತುಂಬಿಕೊಂಡು ಹೋಗುವುದನ್ನು ನೋಡಿದ್ದೀರಲ್ಲಾ , ಅದೇ ರೀತಿ ಪೊಲೀಸರು ಬಿಡಾಡಿ ಜಾನುವಾರುಗಳ ಹಿಡಿಯುತ್ತಿದ್ದಾರೆ. ಬುಧವಾರ ಮಧ್ಯರಾತ್ರಿಯಿಂದೀಚೆಗೆ 300 ಕ್ಕೂ ಹೆಚ್ಚು ದನಗಳು ಪೊಲೀಸರಿಗೆ ಸಿಕ್ಕಿವೆ. ಬಂಧನಕ್ಕೊಳಗಾದ ದನಗಳು ಕಾಟನ್ಪೇಟೆಯ ಸೂಪರ್ ಚಿತ್ರಮಂದಿರದ ಆವರಣ, ಕೋರಮಂಗಲದ ಗೋಶಾಲೆ ಮತ್ತಿತರ ಆವರಣಗಳಲ್ಲಿ ಹುಲ್ಲು ಮೇಯುತ್ತಿವೆ.
ಹಾಲು ಕರೆದುಕೊಂಡು ಬೀದಿಗೆ ದೂಡಿದ ಜಾನುವಾರುಗಳು ಬೆಳಗ್ಗೆಯಾದರೂ ಮನೆಗೆ ಬರದಾಗ, ಆಯಾಯ ಹಸುಗಳ ಮಾಲೀಕರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿ , ದಂಡ ಕಟ್ಟಿ ಹಸುಗಳನ್ನು ವಾಪಸ್ಸು ಕರೆತರುತ್ತಿದ್ದಾರೆ.
ಗುಸುಗುಸು : ಇರುವ ಕೆಲಸ ಮಾಡಲೇ ಟೈಂ ಅನ್ನೋದು ಇಲ್ಲದಿರುವಾಗ ಜಾನುವಾರಗಳ ಹಿಡಿಯಲಿಕ್ಕೆ ಹೆಚ್ಚುವರಿ ಸಮಯ ಎಲ್ಲಿಂದ ತರುವುದಪ್ಪಾ ಎಂದು ಪೊಲೀಸರು ಪಿಸುಗುಟ್ಟುತ್ತಿದ್ದಾರೆ. ಏನೂ ಕೇಳಿಸದವರಂತೆ ಸಾಂಗ್ಲಿಯಾನ ಕಟ್ಟುನಿಟ್ಟಿನ ಹೊಸ ಆದೇಶಗಳನ್ನು ಹೊರಡಿಸುತ್ತಲೇ ಇದ್ದಾರೆ.
ಬೆಂಗಳೂರಿನ ವಿಶೇಷ ಇನ್ನೇನಪ್ಪಾ ಅಂದರೆ...
- ಬಸ್ಸು ಮುಂತಾದ ಭಾರೀ ವಾಹನಗಳನ್ನು ಹೊರತುಪಡಿಸಿ, ಉಳಿದ ವಾಹನಗಳಿಗೆ ನಗರದ ನೃಪತುಂಗ ಹಾಗೂ ಕಸ್ತುರಬಾ ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ಶೀಘ್ರದಲ್ಲಿ ಅನುಮತಿ.
- ಎಂ.ಜಿ.ರಸ್ತೆ ಹಾಗೂ ಮೇಲು ಸೇತುವೆಗಳಲ್ಲಿ ಸೈಕಲ್ ಸಂಚಾರಕ್ಕೆ ನಿಷೇಧ. ಈ ಆದೇಶ ಶೀಘ್ರದಲ್ಲೇ ಜಾರಿ.
- ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ವಾರಕ್ಕೆರಡು ದಿನ ವಾಹನ ಸಂಚಾರ ಹಾಗೂ ವಾಹನಗಳ ಪಾರ್ಕಿಂಗ್ ರದ್ದು ಪಡಿಸಲು ಚಿಂತನೆ. ಈ ಪ್ರದೇಶದಲ್ಲಿ ಗ್ರಾಹಕರು ಆರಾಮಾಗಿ ಷಾಪಿಂಗ್ ಮಾಡಲೆಂದು ಈ ಕ್ರಮ.
- ಮಹಾತ್ಮಗಾಂಧಿ ರಸ್ತೆ ಹಾಗೂ ಕಬ್ಬನ್ ರಸ್ತೆಗಳಲ್ಲಿ ಏಕಮುಖ ಸಂಚಾರ ಜಾರಿಗೊಳಿಸಲು ಕ್ರಮ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications