ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂತಿದೋ ಕನ್ನಡ ಮಾಸ! ವಾಟಾಳರಿಗೋ ಕೈತುಂಬಾ ಕೆಲಸ!
ಬೆಂಗಳೂರು: ಕನ್ನಡ ಚಳವಳಿಗಾಗಿ ಬೆಳ್ಳಿಗದೆ ಪಡೆದ ಖ್ಯಾತಿಯ ವಾಟಾಳ್ ನಾಗರಾಜ್ ಅವರಲ್ಲಿ 2001 ನೇ ಸಾಲಿನ ನವಂಬರ್ ಕೂಡ ಕನ್ನಡ ಪರ ಕಾಳಜಿಯನ್ನು ಉಕ್ಕಿಸಿದೆ. ಅವರು, ನವಂಬರ್ 1 ರಿಂದ ರಾಜ್ಯಕ್ಕೆ ಪರಭಾಷಿಗರ ವಲಸೆಯನ್ನು ತಡೆಗಟ್ಟುವ ಹೋರಾಟ ನಡೆಸಲಿದ್ದಾರೆ.
ಕನ್ನಡ ಚಳವಳಿ ಪಕ್ಷ ದ ಮೂಲಕ ಚಳವಳಿ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ಹೇಳಿದರು. ಚಳವಳಿಯ ಮೊದಲ ಅಂಗವಾಗಿ- ಕನ್ನವಡಲ್ಲದ ನಾಮಫಲಕಗಳಿಗೆ ವಾಟಾಳ್ ಟಾರ್ ಬಳಿಯುತ್ತಾರೆ ಹಾಗೂ ನಾಮಫಲಕಗಳನ್ನು ಕಿತ್ತು ಎಸೆಯಲಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವ ಬಗೆಗೆ ವಾಟಾಳ್ ತೀವ್ರ ಆತಂಕ ವ್ಯಕ್ತಪಡಿಸಿದರು. ಅವರ ಆತಂಕವನ್ನು ಅವರ ಮಾತುಗಳಲ್ಲೇ ಹೇಳುವುದಾದರೆ-
- ಆಡಳಿತ ಭಾಷೆಯಾಗಿ ಕನ್ನಡ ನೆಪಮಾತ್ರ. ಸರ್ಕಾರಿ ಸಮಾರಂಭಗಳು ಇಂಗ್ಲೀಷಿನಲ್ಲಿಯೇ ನಡೆಯುತ್ತವೆ. ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರ ಮೂಲೆಗುಂಪು ಮಾಡಿದೆ.
- ಪರಭಾಷಿಗರ ವಲಸೆ ತಡೆಗಟ್ಟುವಲ್ಲಿ ಏಕೀಕರಣ ನಂತರ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ವಿಫಲವಾಗಿವೆ.
- ಇನ್ನೈದು ವರ್ಷಗಳಲ್ಲಿ ಕರ್ನಾಟಕದಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾದರೆ ಆಶ್ಚರ್ಯವಿಲ್ಲ . ಕನಿಷ್ಠ 1 ಕೋಟಿಗೂ ಹೆಚ್ಚು ಪರಭಾಷಿಗರು ಕರ್ನಾಟಕದಲ್ಲಿದ್ದಾರೆ.
- ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಶತ 70 ರಷ್ಟು ಪರಭಾಷಿಕರು ಆಯ್ಕೆಯಾಗುವ ಸಾಧ್ಯತೆಯಿದೆ. ಇದನ್ನು ತಡೆಗಟ್ಟಬೇಕು. ತಡೆಗಟ್ಟಲೆಂದೇ ಕನ್ನಡ ಚಳವಳಿ ಪಕ್ಷ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ವಾಟಾಳ್ ಅವರ ಕನ್ನಡ ಕಾಳಜಿಯ ಬಗ್ಗೆ ನೀವೇನಂತೀರಿ?
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Wednesday, October 31, 2001, 5:30 [IST]