ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಿಸೆಂಬರ್ 28ರಂದು ಒಡಿಯೂರಿನಲ್ಲಿ ತುಳು ಸಾಹಿತ್ಯ ಸಮ್ಮೇಳನ
ವಿಟ್ಲ: ಇಲ್ಲಿನ ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ದತ್ತಯಾಗ, ದತ್ತಜಯಂತಿ ಮಹೋತ್ಸವದ ಜೊತೆಗೆ ಡಿಸೆಂಬರ್ ತಿಂಗಳಲ್ಲಿ ತುಳು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಗುರುದೇವಾನಂದ ಸ್ವಾಮೀಜಿಗಳ ಪ್ರಕಟಣೆ ತಿಳಿಸಿದೆ.
ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮುಂಬಯಿಯ ಹಿರಿಯ ಬರಹಗಾರ್ತಿ ಡಾ. ಸುನೀತಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸಂದರ್ಭದಲ್ಲಿ ತುಳು ಪೌರಾಣಿಕ, ಐತಿಹಾಸಿಕ ಮತ್ತು ಜಾನಪದ ಆಧಾರಿತ ನಾಟಕ ಸ್ಪರ್ಧೆ, ಜಾನಪದ ಹಾಡು, ತುಳು ಭಾವ ಗೀತೆ ಗಾಯನ ಸ್ಪರ್ಧೆ, ಕುಣಿತಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ತುಳು ಸಂಸ್ಕೃತಿ ದರ್ಶನ ಎಂಬ ಪ್ರದರ್ಶನವನ್ನೂ ಆಯೋಜಿಸಲಾಗಿದೆ.
ಸಮ್ಮೇಳನವು ಡಿಸೆಂಬರ್ 28ರಂದು ನಡೆಯಲಿದ್ದು, ತುಳು ಸಾಹಿತ್ಯ ವಲಯದ ಹಿರಿಯರಾದ, ಗುರುದೇವಾನಂದ ಸ್ವಾಮೀಜಿ, ಪಾಲ್ತಾಡಿ ರಾಮಕೃಷ್ಣ ಆಚಾರ್, ಭಾಸ್ಕರ ರೈ ಕುಕ್ಕುವಳ್ಳಿ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Monday, October 29, 2001, 5:30 [IST]