ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಫಿ ಉದ್ಯಮಕ್ಕೂ ಸಹಾಯ ಮಾಡಿ, ಚಿಕ್ಕಮಗಳೂರು ರೈತರ ಮೊರೆ
ಚಿಕ್ಕಮಗಳೂರು : ಕಾಫಿ ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ಕಾಫಿ ಉದ್ಯಮದಲ್ಲಿ ಹಿನ್ನಡೆಯುಂಟಾಗಿದ್ದು, ಈ ಕುರಿತು ತಮ್ಮ ಬೇಡಿಕೆಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮುಂದಿಡಲು ಜಿಲ್ಲೆಯ ಕಾಫಿ ಮಂಡಳಿಯ ಸದಸ್ಯರು ನಿರ್ಧರಿಸಿದ್ದಾರೆ.
ಸುಷ್ಮಾ ಸ್ವರಾಜ್ ಅವರು ಗುರುವಾರದಂದು ಇಲ್ಲಿನ ಬೀರೂರಿಗೆ ಭೇಟಿ ನೀಡಲಿದ್ದು, ಜಿಲ್ಲೆಯ ಕಾಫಿ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಿಜೆಪಿಯ ಅತ್ತಿಕಟ್ಟೆ ಜಗನ್ನಾಥ್ ಬುಧವಾರದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಾಫಿ ಮಂಡಳಿಯ ಸದಸ್ಯರು ಮತ್ತು ಕೆಜಿಎಫ್ ಆಶ್ರಯದಲ್ಲಿ , ಬೆಳೆಗಾರರ ನಿಯೋಗವೊಂದು ಸುಷ್ಮಾ ಸ್ವರಾಜ್ರೊಂದಿಗೆ ಮಾತುಕತೆ ನಡೆಸಲಿದೆ.
ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಸ್ಥಿರತೆ ಕಳೆದುಕೊಳ್ಳುತ್ತಿದೆ. ಬೆಳೆಗಾರರಿಗೆ ಬ್ಯಾಂಕ್ಗಳಲ್ಲಿ ನೀಡಿದ ಸಾಲದ ಪುನರ್ ನವೀಕರಣದಿಂದಲೂ ಯಾವುದೇ ಪ್ರಯೋಜನವಾಗಿಲ್ಲ. 35 ವರ್ಷಗಳಷ್ಟು ಹಿಂದಿನ ಸ್ಥಿತಿಗೆ ಕಾಫಿ ಬೆಲೆ ತಲುಪಿದೆ ಎಂದು ಜಗನ್ನಾಥ್ ಹೇಳಿದರು.
ಕಾಫಿ ಮಂಡಳಿಯ ಬೇಡಿಕೆಗಳು :
- ಇತರೆ ಉದ್ಯಮಗಳಂತೆ ಕಾಫಿ ಉದ್ಯಮವೂ ರೋಗಗ್ರಸ್ತ ಎಂದು ಘೋಷಿಸಬೇಕು.
- 1998ರಿಂದೀಚೆಗಿನ ಬ್ಯಾಂಕ್ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು.
- ಕಾಫಿ ಬೆಲೆಗೆ ಸ್ಥಿರತೆ ಬರುವವರೆಗೆ ತೆರಿಗೆಗಳನ್ನು ಅಮಾನತಿನಲ್ಲಿಡಬೇಕು .
- ಅಮೆರಿಕಾ ದಾಳಿಯಿಂದ ಉಂಟಾಗಿರುವ ಯುದ್ಧ ಪರಿಸ್ಥಿತಿಯಿಂದಾಗಿ ಕಾಫಿ ಹೊರದೇಶಗಳಿಗೆ ರಫ್ತಾಗುತ್ತಿಲ್ಲ. ಆದ್ದರಿಂದ ಪರಿಸ್ಥಿತಿ ಸರಿಯಾಗುವವರೆಗೆ ಕಾಫಿಗೆ ಬೆಂಬಲ ಬೆಲೆ ಘೋಷಿಸಬೇಕು .
-
(ಇನ್ಫೋ
ವಾರ್ತೆ)
Comments
Story first published: Thursday, October 18, 2001, 5:30 [IST]