ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಂಚಭೂತಗಳ ಶುದ್ಧೀಕರಣಕ್ಕೆ ಪ್ರಯಾಗದಲ್ಲಿ ಅಶ್ವಮೇಧ ಯಾಗ
ಬೆಂಗಳೂರು : ಮಲಿನಗೊಂಡ ಪಂಚಭೂತಗಳನ್ನು ಶುದ್ಧೀಕರಿಸಿ, ವಿಶ್ವಶಾಂತಿಗಾಗಿ ಅಶ್ವಮೇಧ ಯಾಗ (ವಾಜಪೇಯಿ ಯಜ್ಞ)ವನ್ನು 2002 ನೇ ಇಸವಿ ಏಪ್ರಿಲ್ ತಿಂಗಳಲ್ಲಿ ಪ್ರಯಾಗದಲ್ಲಿ ನಡೆಸಲು ಪ್ರಸಿದ್ಧ ಜ್ಯೋತಿಷಿ ಬಾಲಗೋಪಾಲ ಜೋಯಿಸ ಉದ್ದೇಶಿಸಿದ್ದಾರೆ.
7 ಸಾವಿರ ಪುರೋಹಿತರು ಭಾಗವಹಿಸುವ ಈ ಯಾಗಕ್ಕೆ 7 ಕೋಟಿ ರುಪಾಯಿ ಖರ್ಚಾಗುತ್ತದೆ. ವಿಶ್ವಶಾಂತಿಗಾಗಿ ನಡೆಯುವ ಈ ಯಾಗ 108 ದಿನಗಳ ಕಾಲ ನಡೆಯಲಿದೆ ಎಂದು ಬಾಲಗೋಪಾಲ ಜೋಯಿಸರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವದೆಲ್ಲೆಡೆ ಭಯೋತ್ಪಾದನೆ ನೆಲೆಗೊಂಡಿದೆ. ಪಂಚಭೂತಗಳು ಮಲಿನಗೊಂಡಿರುವುದೇ ಇದಕ್ಕೆ ಕಾರಣ. ಯಾಗದ ಮೂಲಕ ಪಂಚಭೂತಗಳನ್ನು ಶುದ್ಧೀಕರಿಸಲಾಗುವುದು ಎಂದು ಜೋಯಿಸರು ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Thursday, October 18, 2001, 5:30 [IST]