ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಭೂತಗಳ ಶುದ್ಧೀಕರಣಕ್ಕೆ ಪ್ರಯಾಗದಲ್ಲಿ ಅಶ್ವಮೇಧ ಯಾಗ

By Staff
|
Google Oneindia Kannada News

ಬೆಂಗಳೂರು : ಮಲಿನಗೊಂಡ ಪಂಚಭೂತಗಳನ್ನು ಶುದ್ಧೀಕರಿಸಿ, ವಿಶ್ವಶಾಂತಿಗಾಗಿ ಅಶ್ವಮೇಧ ಯಾಗ (ವಾಜಪೇಯಿ ಯಜ್ಞ)ವನ್ನು 2002 ನೇ ಇಸವಿ ಏಪ್ರಿಲ್‌ ತಿಂಗಳಲ್ಲಿ ಪ್ರಯಾಗದಲ್ಲಿ ನಡೆಸಲು ಪ್ರಸಿದ್ಧ ಜ್ಯೋತಿಷಿ ಬಾಲಗೋಪಾಲ ಜೋಯಿಸ ಉದ್ದೇಶಿಸಿದ್ದಾರೆ.

7 ಸಾವಿರ ಪುರೋಹಿತರು ಭಾಗವಹಿಸುವ ಈ ಯಾಗಕ್ಕೆ 7 ಕೋಟಿ ರುಪಾಯಿ ಖರ್ಚಾಗುತ್ತದೆ. ವಿಶ್ವಶಾಂತಿಗಾಗಿ ನಡೆಯುವ ಈ ಯಾಗ 108 ದಿನಗಳ ಕಾಲ ನಡೆಯಲಿದೆ ಎಂದು ಬಾಲಗೋಪಾಲ ಜೋಯಿಸರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದೆಲ್ಲೆಡೆ ಭಯೋತ್ಪಾದನೆ ನೆಲೆಗೊಂಡಿದೆ. ಪಂಚಭೂತಗಳು ಮಲಿನಗೊಂಡಿರುವುದೇ ಇದಕ್ಕೆ ಕಾರಣ. ಯಾಗದ ಮೂಲಕ ಪಂಚಭೂತಗಳನ್ನು ಶುದ್ಧೀಕರಿಸಲಾಗುವುದು ಎಂದು ಜೋಯಿಸರು ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X