ಒಸಾಮ ಬಿನ್ ಲ್ಯಾಡೆನ್ಗೆ ಸಿಎನ್ಎನ್ಕಳುಹಿಸಿರುವ 6 ಪ್ರಶ್ನೆಗಳು....
ನ್ಯೂಯಾರ್ಕ್ : ಒಸಾಮ ಬಿನ್ ಲ್ಯಾಡೆನ್ ಬಗ್ಗೆ ಇಷ್ಟೆಲ್ಲಾ ಸದ್ದು ಗದ್ದಲಗಳಾಗುತ್ತಿರುವಾಗ ಅವನದೊಂದು ಅಪರೂಪದ ಸಂದರ್ಶನ ಪಡೆದರೆ? ಈ ನಿಟ್ಟಿನಲ್ಲಿ ಮಾಧ್ಯಮಗಳು ಯೋಚಿಸಿ, ವಿಫಲ ಯತ್ನಗಳನ್ನು ನಡೆಸದೇ ಇದ್ದಿರುವುದಿಲ್ಲ. ಆದರೆ ಅವನು ಅಡಗಿರುವ ಅತಳ ಸುತಳ ಪಾತಾಳ ಹೊಕ್ಕು, ಕೆಣಕಿ- ಕೆದಕಿ, ಕಿಚಾಯಿಸಿ ಜೀವಸಹಿತ ಬಂದೇ ಬರಬಲ್ಲೆನೆಂಬ ಧೈರ್ಯ ಎಷ್ಟು ಜನಕ್ಕೆ ಇದ್ದೀತು? ಅಮೆರಿಕಾ ಮೇಲೆ ಉಗ್ರರ ದಾಳಿ ಆದಾಗಿನಿಂದ ಆಫ್ಘನ್ ನೆತ್ತಿ ಮೇಲೆ ಸರಬರ ವಿಮಾನಗಳು ಹಾರುತ್ತಾ ಬಾಂಬ್ ಉಗಿಯುತ್ತಿರುವ ಕ್ಷಣ ಕ್ಷಣದ ಚಿತ್ರಗಳ ಕಟ್ಟಿಕೊಡುತ್ತಿರುವ ಸಿಎನ್ಎನ್ಗೆ ಬಯಸದೇ ಇಂಥಾ ಅವಕಾಶ ಸಿಕ್ಕಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿರುವಂತೆ ತನ್ನದೊಂದು ಸಂದರ್ಶನ ಪಡೆಯುವಂತೆ ಒಸಾಮನೇ ಇಷಾರೆ ಕೊಟ್ಟಿದ್ದಾನೆ. ಒಸಾಮನ ಸಂಘಟನೆ ಅಲ್- ಕ್ವೈದಾ ತನ್ನೊಡೆಯನ ಬಯಕೆಯನ್ನು ಅರಬ್ ಟೆಲಿವಿಷನ್ ಜಾಲ ಅಲ್- ಜರಿkುೕರಾ ಮುಖಾಂತರ ಸಿಎನ್ಎನ್ಗೆ ಮುಟ್ಟಿಸಿದೆ. ಇದೀಗ ಸಿಎನ್ಎನ್ 6 ಪ್ರಶ್ನೆಗಳ ಚೀಟಿಯಾಂದನ್ನು ಒಸಾಮನಿಗೆ ಕಳುಹಿಸಿ ಕೊಟ್ಟಿದೆ.
ಒಸಾಮನಿಗೆ ಸಿಎನ್ಎನ್ ಕಳುಹಿಸಿಕೊಟ್ಟಿರುವ ಪ್ರಶ್ನಾವಳಿಗಳು ಇಂತಿವೆ...
ಸೆಪ್ಟೆಂಬರ್ 11ರ ವಿಮಾನ ಅಪಹರಣ ಮತ್ತು ಈಚಿಗಿನ ಆ್ಯಂಥ್ರಾಕ್ಸ್ ದಾಳಿಯಲ್ಲಿ ನಿಮ್ಮ ಹಾಗೂ ಅಲ್- ಕ್ವೈದಾ ಪಾತ್ರವೇನು?
ಹೈಜಾಕರ್ಗಳಿಗೆ ಅಲ್- ಕ್ವೈದಾ ನೆರವು ನೀಡಿದ್ದು ಯಾವ ರೀತಿಯಲ್ಲಿ ? ಹಣ ಕೊಟ್ಟಿತೋ ಅಥವಾ ತರಪೇತಿ ನೀಡಿತೋ?
ನಿಮ್ಮ ಹಾಗೂ ನಿಮ್ಮ ಸಹಚರರ ಬಳಿ ರಾಸಾಯನಿಕ, ಅಣು ಅಥವಾ ಜೈವಿಕ ಶಸ್ತ್ರಗಳೇನಾದರೂ ಇವೆಯಾ? ಅದನ್ನು ಬಳಸುವ ಯೋಚನೆ ಇದೆಯಾ?
ಇಸ್ಲಾಂ ಧರ್ಮದಲ್ಲಿ ದಾಳಿಗಳನ್ನು ಸಮರ್ಥಿಸಿಕೊಳ್ಳುವಂಥಾ ಯಾವುದೇ ಉಲ್ಲೇಖ ಇಲ್ಲ ಎಂದು ಮುಸ್ಲಿಂ ಮತ್ತು ಅರಬ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಎಷ್ಟೊಂದು ಅಮಾಯಕರನ್ನು ನೀವು ಮತ್ತು ನಿಮ್ಮ ಅನುಯಾಯಿಗಳು ಕೊಂದಿದ್ದೀರಿ. ಅದಕ್ಕೆ ಸಮರ್ಥನೆ ಇದೆಯಾ?
ಈ ಪ್ರಶ್ನೆಗಳಿಗೆ ಲ್ಯಾಡೆನ್ ವಿಡಿಯೋ ಕೆಸೆಟ್ ಮೂಲಕ ಉತ್ತರ ಕೊಡಲಿದ್ದಾನೆ ಎಂದು ಸಿಎನ್ಎನ್ ಹೇಳಿಕೊಂಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ.
(ಇನ್ಫೋ ವಾರ್ತೆ)
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್












Click it and Unblock the Notifications