ಆಗ್ರಾದ ತಾಜ್ಮಹಲಿನಲ್ಲಿ ವಿದೇಶೀ ಪ್ರವಾಸಿಗರಗಲಗಲ ಸದ್ದಿಲ್ಲ
ಆಗ್ರಾ: ಪ್ರತಿವರ್ಷವೂ ಅಕ್ಟೋಬರ್ ತಿಂಗಳಿನಲ್ಲಿ ವೀಕ್ಷಕರಿಂದ ಗಿಜಿಗುಡುತ್ತಿದ್ದ ತಾಜ್ಮಹಲ್ನಲ್ಲಿ ಈ ಬಾರಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಪ್ರವಾಸೋದ್ಯಮ ಇಲಾಖೆಯ ಆಗ್ರಾ ವರದಿ ಪ್ರಕಾರ ಅಮೆರಿಕನ್ನರು ಆಫ್ಘಾನಿಸ್ತಾನದ ಮೇಲೆ ಬಾಂಬ್ ದಾಳಿ ಆರಂಭಿಸಿದ ನಂತರ ತಾಜ್ ಮಹಲಿಗೆ ಬರುವ ಪ್ರವಾಸಿಗರ ಸಂಖ್ಯೆ ಮೂರನೇ ಎರಡರಷ್ಟು ಕಡಿಮೆಯಾಗಿದೆ. ಸಾಮಾನ್ಯವಾಗಿ ಅತ್ತ ಮಳೆಗಾಲವೂ ಅಲ್ಲದ ಇತ್ತ ಸುಡು ಬಿಸಿಲ ಕಾಲವೂ ಅಲ್ಲದ ಅಕ್ಟೋಬರ್ನಲ್ಲಿ ಅತೀ ಹೆಚ್ಚು ಮಂದಿ ಪ್ರವಾಸಿಗರು ತಾಜ್ಮಹಲ್ನೋಡಲು ಬರುತ್ತಾರೆ. ಆದರೆ ಈ ವರ್ಷ ತಾಜ್ನಗರದಲ್ಲಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಆಗ್ರಾದ ಪ್ರಮುಖ ವಸತಿಗೃಹ ಕಾಂತ್ ಹೋಟೆಲ್ಸ್ನ ಮಾಲಿಕ ಅತುಲ್ ಕಾಂತ್ ಗುಪ್ತಾ ಹೇಳುತ್ತಾರೆ.
ತಾಜ್ಮಹಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ವಿದೇಶೀಯರು. ಅವರೆಲ್ಲ ಮುಂಚಿತವಾಗಿಯೇ ವಸತಿಗೃಹಗಳನ್ನು ಬುಕ್ ಮಾಡಿ ಆಗ್ರಾಕ್ಕೆ ಬರುತ್ತಿದ್ದರು. ಅಮೆರಿಕಾ ದಾಳಿಯ ಪರಿಣಾಮವಾಗಿ ಆಗ್ರಾಕ್ಕೆ ಆಗಮಿಸಬೇಕಿದ್ದ ಶೇ 65 ವಿದೇಶಿ ಪ್ರವಾಸಿಗರು ಹೋಟೆಲ್ ಬುಕಿಂಗ್ನ್ನು ಕ್ಯಾನ್ಸಲ್ ಮಾಡಿಸಿಕೊಂಡಿರುವುದಾಗಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ರಾಜಧಾನಿ ದೆಹಲಿಗೆ 200 ಕಿಲೋಮೀಟರ್ ದೂರಲ್ಲಿರುವ ಆಗ್ರಾದಲ್ಲಿ ಶಹಜಹಾನ್ನ ಪ್ರೇಮ ದ್ಯೋತಕ ತಾಜ್ಮಹಲ್ ಮಾತ್ರವಲ್ಲದೆ, ಇನ್ನೆರಡು ವಿಶ್ವ ಸ್ಮಾರಕಗಳಿವೆ. ಅವು ಆಗ್ರಾ ಕೋಟೆ ಮತ್ತು ಫತ್ತೇಪುರ್ ಸಿಕ್ರಿ. ಸುಮಾರು 8 ಲಕ್ಷ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಈ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಅಂದಾಜು 32 ಬಿಲಿಯನ್ ರೂಪಾಯಿ ಲಾಭ ದಕ್ಕುತ್ತಿತ್ತು.
ಆಫ್ಘಾನಿಸ್ತಾನದ ವಿಮಾನಗಳು ತಾಜ್ಮಹಲ್ಮೇಲೆ ಬಾಂಬ್ ಹಾಕಬಹುದೆನ್ನುವ ಭೀತಿ ಆಗ್ರಾದ ಹೋಟೆಲಿಗರನ್ನು ಕಾಡುತ್ತಿದೆ. ಮನಸ್ಸಿನಲ್ಲಿ ಮತ್ತು ದೇಶದಲ್ಲಿ ಶಾಂತಿಯಿದ್ದಾಗ ಮಾತ್ರ ಪ್ರವಾಸೋದ್ಯಮ ಬೆಳೆಯುತ್ತದೆ. ಪ್ರವಾಸೋದ್ಯಮ ಕ್ಷೇತ್ರವೆಂಬುದೇ ಅತ್ಯಂತ ಸೂಕ್ಷ್ಮ ಉದ್ಯಮ ಎಂದು ಆಗ್ರಾದ ವಿದೇಶೀ ಪ್ರವಾಸ ಮತ್ತು ಮಾರಾಟ ವ್ಯವಹಾರಗಳ ಸಂಘಟನೆಯ ಸಂಯೋಜಕ ಪ್ರಹ್ಲಾದ್ ಅಗರವಾಲ್ ಅಭಿಪ್ರಾಯಪಡುತ್ತಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications