ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಣೆಬೆನ್ನೂರು ಬಳಿ ಕುರುಬನ ಬೇಜವಾಬ್ದಾರಿಗೆ 20 ಕುರಿಗಳು ಬಲಿ

By Staff
|
Google Oneindia Kannada News

ಹಾವೇರಿ : ರಾಣೆಬೆನ್ನೂರಿನ ಕಾಕೋಳದ ಹತ್ತಿರ ಕುರಿಮಂದೆಗೆ ಬಸ್‌ ಡಿಕ್ಕಿ ಹೊಡೆದು 20 ಕುರಿಗಳು ಸತ್ತಿವೆ.

ಬುಡಪ್ಪನಹಳ್ಳಿ ಕ್ರಾಸ್‌ನಲ್ಲಿ ಗುರುವಾರ ರಾತ್ರಿ ಈ ದುರಂತ ಸಂಭವಿಸಿದೆ. ಹುಬ್ಬಳ್ಳಿಯಿಂದ ಮಡಿಕೇರಿ ಕಡೆಗೆ ಬಸ್‌ ಹೋಗುತ್ತಿತ್ತು. ಭರ್ರನೆ ಬರುತ್ತಿದ್ದ ಬಸ್ಸನ್ನು ಗಮನಿಸದ ಕುರುಬ ಕುರಿಮಂದೆಯನ್ನು ಹೆದ್ದಾರಿ ದಾಟಿಸಲು ಯತ್ನಿಸಿದ. ಚಾಲಕನಿಗೆ ತಕ್ಷಣವೇ ಬಸ್ಸನ್ನು ನಿಯಂತ್ರಿಸಲಾಗಲಿಲ್ಲ. ಬಸ್‌ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಲು ಚಾಲಕ ಪ್ರಯತ್ನಿಸಿದ. ರೊಚ್ಚಿಗೆದ್ದ ಗ್ರಾಮಸ್ಥರು ನಡುರಸ್ತೆಗೆ ನುಗ್ಗಿ ಬಸ್ಸನ್ನು ತಡೆದು, ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಇನ್ನೂ ಕೆಲವು ಕುರಿಗಳಿಗೆ ಗಾಯಗಳಾಗಿದ್ದು, ಪಶು ವೈದ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಿದರು. ರಾಣಿಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಚಾಲಕನ ವಿರುದ್ಧ ಮೊಕದ್ದಮೆ ದಾಖಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X