ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಡೆ ಶ್ರಾವಣ ಸೋಮವಾರ 20 ಸಾವಿರ ಭಕ್ತರಿಂದಮಹಾಬಲ ದರ್ಶನ
ಕಾರವಾರ : ಶಿವನನ್ನು ಮೆಚ್ಚಿಸಿ, ರಾವಣೇಶ್ವರನು ವರವಾಗಿ ಪಡೆದ ಆತ್ಮಲಿಂಗ ಭೂಸ್ಪರ್ಶಮಾಡಿದ ಪುಣ್ಯಕ್ಷೇತ್ರ ಎಂದು ಹೆಸರಾದ ಗೋಕರ್ಣದ ಮಹಾಬಲೇಶ್ವರನ ದರ್ಶನಕ್ಕಾಗಿ ಕಡೆ ಶ್ರಾವಣ ಸೋಮವಾರ ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.
ಶ್ರಾವಣ ಮಾಸದ ಕೊನೆ ಸೋಮವಾರದ ನಿಮಿತ್ತ ಮಹಾಬಲೇಶ್ವರನ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಶಿವಭಕ್ತರು ಕೋಟಿತೀರ್ಥದಲ್ಲಿ ಮಿಂದು, ಇಲ್ಲಿನ ಶ್ರೀ ಮಹಾಗಣಪತಿ ಹಾಗೂ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದರು.
ಪವಿತ್ರ ಪುಣ್ಯಕ್ಷೇತ್ರವಾದ ಗೋಕರ್ಣ ಓಂ ಬೀಚ್ ಹಾಗೂ ಕುಡ್ಲೇ ಬೀಚ್ನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿ ತಾಣವೆಂದೂ ಜಗದ್ವಿಖ್ಯಾತವಾಗಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, August 14, 2001, 0:00 [IST]