ವರ ಮಹಾಲಕ್ಷ್ಮಿ ಹಬ್ಬದ ಕೊಡುಗೆ-1 ಗುಲಾಬಿಗೆ ಐದೇ ರುಪಾಯಿ!
ಮುಖದೋರದ ಸೂರ್ಯ. ಕುಂಭದ್ರೋಣದ ನಂತರ ಸೋನ್ ಪಪ್ಪಡಿ ಮಳೆ. ಮಾರುಕಟ್ಟೆ ಅಕ್ಷರಶಃ ಕೆಸರುಗದ್ದೆ. ಆದರೂ ವ್ಯಾಪಾರದ ಭರಾಟೆ ಜೋರೋ ಜೋರು. ವರ ಮಹಾಲಕ್ಷ್ಮಿ ಬರಬರುತ್ತಾ ದುಬಾರಿಯಾಗುತ್ತಿದ್ದಾಳೆ ಎಂಬ ಗೊಣಗು ಭಕ್ತರಿಂದ. ಆದರೂ ಹಬ್ಬ, ಬಿಡೋಕಾಗುತ್ತದೆಯೇ ? ಬೆಂಗಳೂರಿನ ವ್ಯಾಪಾರಿಗಳಿಗೆ ಗುರುವಾರ ಸಂಜೆಯಿಂದಲೇ ಲಕ್ಷ್ಮಿ ಯದ್ವಾತದ್ವಾ ಒಲಿದುಬಿಟ್ಟಿದ್ದಾಳೆ. ದರದ ನಮೂನೆಗೆ ಪಕ್ಕಾ ಉದಾಹರಣೆ- ಒಂದು ಗುಲಾಬಿ ಹೂವಿನ ಬೆಲೆ ಕೇವಲ 5 ರುಪಾಯಿ !
ಸೌತೆ, ಮೂಲಂಗಿ ಬಿಟ್ಟು ಯಾವ ತರಕಾರಿಯ ಬೆಲೆಯೂ ಪ್ರತಿ ಕಿಲೋಗೆ 10 ರುಪಾಯಿಗಿಂತ ಕಡಿಮೆ ಇಲ್ಲ. ತೆಂಗಿನ ಕಾಯಿಯೂ (ಇದೇ ಲಕ್ಷ್ಮಿ ಅಲ್ಲವೇ?) ವ್ಯಾಪಾರಿಗಳ ಮನಸೋ ಇಚ್ಛೆ ಬೆಲೆಯನ್ನು ಪಡಕೊಂಡು ನಗುತ್ತಿದೆ. ಸೈಜಿಗೆ ತಕ್ಕಂತೆ ದರದಲ್ಲಿ 2 ರಿಂದ 3 ರುಪಾಯಿ ಹೆಚ್ಚಳ. ವರ ಮಹಾಲಕ್ಷ್ಮಿ ವ್ರತಕ್ಕೆ ಅಗತ್ಯವಾದ ಹೂ- ಪತ್ರೆಗಳನ್ನು ಎಷ್ಟೇ ಕೈ ಬಿಗಿ ಮಾಡಿ ತಂದರೂ ಬರೋಬ್ಬರಿ 300 ರುಪಾಯಿ. ಇನ್ನು ಹಣ್ಣು - ತಣ್ಣಗಾಗುವಂತೆ ತೋರುತ್ತಿದ್ದ ಸೇಬಿನ ಬೆಲೆ ಮತ್ತೆ ಆಕಾಶ ಮುಟ್ಟತೊಡಗಿದೆ. ಆಸ್ಟ್ರೇಲಿಯನ್ ಸೇಬು ಕಿಲೋಗೆ 80- 85 ರುಪಾಯಿ. ಅಂದ ಮೇಲೆ 300- 350 ರುಪಾಯಿಗೆ ಕಡಿಮೆಯಲ್ಲಿ ಲಕ್ಷ್ಮಿಗೆ ಹಣ್ಣಿನ ನೈವೇದ್ಯ ಆಗದು.
ಶ್ರಾವಣ ಸಡಗರದ ತಿಂಗಳು. ಆದರೆ ಅದು ಈ ಪಾಟಿ ದುಬಾರಿಯಾದರೆ ? ಒಂದು ವರ ಮಹಾಲಕ್ಷ್ಮಿಗೆ ಬೆಂಗಳೂರಿನ ಪುಟ್ಟ ಸಂಸಾರ ಏನಿಲ್ಲವೆಂದರೂ 2 ಸಾವಿರ ರುಪಾಯಿ ಖರ್ಚು ಮಾಡಬೇಕು. ಕೆಳ ಮಧ್ಯಮ ವರ್ಗದ ತಿಂಗಳ ಪಗಾರಿನ ಅರ್ಧ ಭಾಗ ಇದು, ಸ್ವಾಮಿ. ಹಾಗಂತ ವ್ರತ ಬಿಡೋಕಾಗಲ್ಲ. ಇದಿನ್ನೂ ಆರಂಭ. ಇನ್ನೇನು ಗಣೇಶ ಬರುತ್ತಾನೆ; ಮಂತ್ ಎಂಡಿನ ಜೊತೆಗೆ. ಕಿಸೆಯಲ್ಲಿ ಈಗೇನೋ ಪಗಾರ ತುಂಬಿದೆ. ಆದರೆ ಗಣೇಶನಿಗೆ ಏನು ಮಾಡುವುದು ?- ಇಂಥಾ ದೂರಾಲೋಚನೆ ಮಾಡುತ್ತಾ , ಕಾಲಕ್ಕೆ ಹಿಡಿ ಶಾಪ ಹಾಕುತ್ತಾ ಭಕ್ತಾದಿಗಳು ಹಬ್ಬದಲ್ಲಿ ಮುಳುಗಿದ್ದಾರೆ.
ಹೂ ಮಾರುವಾಕೆ ಬಗಲಲ್ಲೇ ಕೂಗುತ್ತಿದ್ದಾಳೆ- ಮಲ್ಲಿಗೆ, ಮೊಲ್ಲೆ, ಕನಕಾಂಬರ, ಸೇವಂತಿ... ಹಾಕುವ ಮೊಳ ಇಷ್ಟಾದರೆ, ಬೆಲೆ ಅಷ್ಟು ! ಮಳೆರಾಯನನ್ನೂ ಕರೆ ತಂದಿರುವ ಲಕ್ಷ್ಮಿ, ಶ್ರಾವಣದ ಮುಂಬರುವ ಹಬ್ಬಗಳಲ್ಲಾದರೂ ದರ ಇಳಿಕೆಯ ಗಾಳಿ ತರಲಿ.
(ಇನ್ಫೋ ವಾರ್ತೆ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications