ಪ್ರತಿ ದಿನ ಭಾರತದ 200 ಹೆಣ್ಣು ಮಕ್ಕಳು ವೇಶ್ಯಾವೃತ್ತಿಗೆ ಸೇರ್ಪಡೆ!
ನವ ದೆಹಲಿ : ಪ್ರತಿ ದಿನ 200 ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಾರೆ. ಇವರಲ್ಲಿ ಬಹುತೇಕರು ಭೂಕಂಪ ಮೊದಲಾದ ದುರಂತ ಪೀಡಿತ ಪ್ರದೇಶಗಳಿಗೆ ಸೇರಿದವರು ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ದ ಅಧ್ಯಕ್ಷೆ ವಿಭಾ ಪಾರ್ಥಸಾರಥಿ ತಿಳಿಸಿದ್ದಾರೆ. ಮಕ್ಕಳ ಕೊಡು- ಕೊಳ್ಳುವಿಕೆ ಕುರಿತ ರಾಷ್ಟ್ರೀಯ ಸಲಹಾ ಸಮಾವೇಶದಲ್ಲಿ ಗುರುವಾರ ಅವರು ಮಾತಾಡುತ್ತಿದ್ದರು.
ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ಜೆಡಬ್ಲ್ಯುಪಿ ಹಾಗೂ ಯೂನಿಫೆಮ್ ಜಂಟಿಯಾಗಿ ಎರಡು ದಿನಗಳ ಕಾಲದ ಈ ಸಮಾವೇಶ ಆಯೋಜಿಸಿದ್ದು, ಗುರುವಾರ ಸಮ್ಮೇಳನ ಪ್ರಾರಂಭವಾಯಿತು. ಗ್ರಾಹಕರನ್ನು ಆಕರ್ಷಿಸಲು ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಪ್ರಭಾವಿತರಾಗುವ ಮಕ್ಕಳು ಅವನ್ನು ಕೊಳ್ಳಲು ಸುಲಭವಾಗಿ ಹಣ ಸಂಪಾದಿಸುವ ಮಾರ್ಗ ಹಿಡಿಯುತ್ತಾರೆ. ಈ ಸುಲಭ ಮಾರ್ಗ ಪಾರ್ಟ್ಟೈಂ ಸೂಳೆಗಾರಿಕೆ ! ಪ್ರವಾಸೋದ್ಯಮದ ಬೆಳವಣಿಗೆಯೂ ಮನರಂಜನೆ ಸೊಂಟದ ಕೆಳಗಿನ ಮಟ್ಟ ಮೀರುವಂತೆ ಮಾಡಿದೆ. ವೇಶ್ಯಾವಾಟಿಕೆ ವ್ಯಾಪಕವಾಗಲು ಇದೂ ಒಂದು ಕಾರಣ ಎಂದು ವಿಭಾ ಹೇಳಿದರು.
ಸಮಾವೇಶದ ಅದ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಮಾನವ ಹಕ್ಕು ಆಯೋಗ (ಎನ್ಎಚ್ಆರ್ಸಿ) ದ ಅಧ್ಯಕ್ಷ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಮಾತನಾಡಿ, ಮಕ್ಕಳ ಹಿತರಕ್ಷಣೆಗೆ ಕಾನೂನಾತ್ಮಕ ಸವಲತ್ತುಗಳಿದ್ದರೂ, ರಾಜಕೀಯವಾಗಿ ಅವನ್ನು ಯಶಸ್ವಿಯಾಗಿ ಅನುಷ್ಟಾನಕ್ಕೆ ತರದಿರುವುದೇ ಮಕ್ಕಳ ಶೋಷಣೆಗೆ ಕಾರಣವಾಗಿದೆ ಎಂದರು.
ಜೆಡಬ್ಲ್ಯುಪಿ ನಿರ್ದೇಶಕಿ ಜ್ಯೋತ್ಸಾ ಚಟರ್ಜಿ ದೇಶದ ವಿವಿಧೆಡೆಗಳಲ್ಲಿ ವೇಶ್ಯಾವಾಟಿಕೆಯ ಪರಿಪರಿಯನ್ನು ಅಂಕಿ- ಅಂಶಗಳ ಮೂಲಕ ತಿಳಿಸಿದ್ದು ಹೀಗೆ-
- ದತ್ತು ತೆಗೆದುಕೊಂಡು, ಹೆಣ್ಣು ಮಕ್ಕಳನ್ನು ಸೂಳೆಗಾರಿಕೆಗೆ ಎಳೆದಿರುವ ಪ್ರಕರಣಗಳು ಒಟ್ಟು ಪ್ರತಿಶತ 40
- ಮುಂಬಯಿಯ ಅಡ್ಡಾಗಳಲ್ಲಿ ಇರುವ ದೇವದಾಸಿಯರು 15- 20 ಪ್ರತಿಶತ
- ನಾಗಪುರ, ದೆಹಲಿ ಹಾಗೂ ಹೈದರಾಬಾದ್ನ ಕರೆವೆಣ್ಣುಗಳಲ್ಲಿ ಪ್ರತಿಶತ 50 ದೇವದಾಸಿಯರು
- ಬೆಳಗಾಂ ಜಿಲ್ಲೆಯಲ್ಲಿ 80 ಪ್ರತಿಶತ ದೇವದಾಸಿಯರಿದ್ದಾರೆ !
- ಮಾನಭಂಗಕ್ಕೀಡಾಗುವ ಪ್ರತಿಶತ 5 ರಷ್ಟು ಹೆಣ್ಣು ಮಕ್ಕಳು ವೇಶ್ಯಾವಾಟಿಕೆಗೆ ಇಳಿಯುತ್ತಾರೆ
- 8 ಪ್ರತಿಶತ ಹೆಂಗಸರು ಲೈಂಗಿಕ ತೃಷೆ ತೀರಿಸಿಕೊಳ್ಳಲು ಈ ಮಾರ್ಗ ಹಿಡಿಯುತ್ತಾರೆ
- 5 ಪ್ರತಿಶತ ದಲಿತರು ಹಾಗೂ ಆರ್ಥಿಕ ಸಮಸ್ಯೆಗೆ ತುತ್ತಾದವರು ಈ ಕೆಲಸ ಮಾಡುತ್ತಾರೆ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications