Get Updates
Get notified of breaking news, exclusive insights, and must-see stories!

ಛೋಟಾ ರಾಜನ್‌ ಗುಂಪಿನ ಮೂವರು ಪೊಲೀಸರ ಗುಂಡಿಗೆ ಬಲಿ

ಬೆಂಗಳೂರು : ಛೋಟಾ ರಾಜನ್‌ ಗುಂಪಿಗೆ ಸೇರಿದವರೆನ್ನಲಾದ ಮುಂಬೈ ಭೂಗತ ಜಗತ್ತಿನ ಮೂವರು ಕುಖ್ಯಾತರನ್ನು ಬುಧವಾರ ರಾತ್ರಿ ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೆಂಗಳೂರು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಈ ಮೂವರು ಕುಖ್ಯಾತರು ಪೊಲೀಸರು ನಡೆಸಿದ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಫ್ರೇಜರ್‌ ಟೌನ್‌ ಇನ್ಸ್‌ಪೆಕ್ಟರ್‌ ಶಿವರಾಂ ರೆಡ್ಡಿ , ಕಮರ್ಷಿಯಲ್‌ ಸ್ಟ್ರೀಟ್‌ ಇನ್ಸ್‌ಪೆಕ್ಟರ್‌ ಸೌದಾಗರ್‌ ಅವರು ಗುಂಡು ಹಾರಿಸಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಮುಖ ಅಪರಾಧವೊಂದನ್ನೆಸಗಲು ಈ ತಂಡದ ಸದಸ್ಯರು ಬೆಂಗಳೂರಿಗೆ ಆಗಮಿಸಿದ್ದು , ಬ್ಯಾಂಕಾಕ್‌ಗೆ ತೆರಳಲು ಉದ್ದೇಶಿಸಿದ್ದರು ಎನ್ನಲಾಗಿದೆ. ಜಗದೀಶ್‌ ಫಕೀರ್‌ ಶೆಟ್ಟಿ , ಸುಶೀಲ್‌ ಗಾಂವಕರ್‌ ಹಾಗೂ ಯಶವಂತ್‌ ಚಿಕ್ನಾ ಎಂದು ಸತ್ತವರನ್ನು ಗುರ್ತಿಸಲಾಗಿದ್ದು, ಮೃತರ ಶವಗಳನ್ನು ಬೌರಿಂಗ್‌ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಭರಣ ಅಂಗಡಿ ದರೋಡೆ ಪ್ರಕರಣವೊಂದರಲ್ಲಿ ಯಶವಂತ್‌ ಚಿಕ್ನಾ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ .

ರೌಡಿಗಳ ಖಚಿತ ಸುಳಿವಿನ ಮೇಲೆ ನಗರಕ್ಕೆ ಆಗಮಿಸಿದ್ದ ಮುಂಬೈ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗುಂಡಿನ ಚಕಮಕಿಯಲ್ಲಿ ಪೊಲೀಸರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ . ಮೃತರಿಂದ ಎರಡು ವಿದೇಶಿ ಪಿಸ್ತೂಲ್‌ ಹಾಗೂ ಒಂದು ಸ್ವದೇಶಿ ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+