ಆತ್ಮಹತ್ಯೆ ತಡೆಯೋದು ಹೇಗೆ ? ಹೇಳಿಕೊಡಲೊಂದು ಕೋರ್ಸು !
* ಅನ್ನಪೂರ್ಣ ಝಾ
ಬೆಂಗಳೂರು : ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಮ್) ಆತ್ಮಹತ್ಯೆ ತಡೆಗಟ್ಟುವ ಕೋರ್ಸೊಂದನ್ನು ಶುರುಮಾಡಿದೆ. ಇದು ಕೇವಲ ಏರ್ಫೋರ್ಸ್ಗಷ್ಟೇ ಸೀಮಿತವಲ್ಲ ; ಸಾಮಾನ್ಯ ಜನರ ಆತ್ಮಹತ್ಯೆ ತಡೆಗೂ ಕೋರ್ಸು ಒತ್ತು ನೀಡುತ್ತಿದೆ.
ಐಎಎಮ್ನ ಕಮಾಂಡೆಂಟ್ ಕೆ.ಎಸ್.ಸೂದನ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಜನ ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತಾರೆ ಎಂಬ ಅಂಶಗಳನ್ನು ಪತ್ತೆ ಮಾಡಿ, ಅವರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಗಟ್ಟುವುದು ಹೇಗೆ ಎಂಬುದನ್ನು ಕೋರ್ಸಿನಲ್ಲಿ ಹೇಳಿಕೊಡಲಾಗುತ್ತದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವಂಥ ಮಾನಸಿಕ ಸ್ಥಿತಿ ಅರಿತು, ಜನರಲ್ಲಿ ಜಾಗೃತಿ ಮೂಡಿಸಿ ಅನಾಹುತ ತಪ್ಪಿಸಬಹುದಾಗಿದೆ ಎಂದರು.
ಇಂಡಿಯನ್ ಏರ್ಫೋರ್ಸ್ನಲ್ಲಿ ಈ ಕೋರ್ಸನ್ನು ಪ್ರಾರಂಭಿಸಲು ಕಾರಣವೇನು ? ವಿವರಿಸುತ್ತಾರೆ ಸೂದನ್...
ತನ್ನ ಹದಿನೇಳು ಹದಿನೆಂಟನೇ ವಯಸ್ಸಿಗೇ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಗೆ ಸೇರುವ ವ್ಯಕ್ತಿ, ಬೌದ್ಧಿಕವಾಗಿ ಸಾಕಷ್ಟು ಮುಂದಿದ್ದರೂ ಮಾನಸಿಕವಾಗಿ ಎಳಸುತನ ಇಣುಕುತ್ತಿರುತ್ತದೆ. ಮನೆಯಿಂದ ದೂರ ಉಳಿಯುವ ಇವರು ಕ್ಲಿಷ್ಟಕರವಾದ ತರಪೇತಿಯಿಂದ ರೋಸಿಹೋಗುವ ಸಾಧ್ಯತೆ ಇದೆ. ಅರ್ಧದಲ್ಲೇ ಬಿಟ್ಟು ಮನೆಗೆ ಹೋದರೆ ಪುಕ್ಕಲುತನ ಎನ್ನುತ್ತಾರೆ. ಇಲ್ಲಿನ ವಾತಾವರಣ ಅಕ್ಷರಶಃ ನರಕ ಎಂಬ ಪ್ರಜ್ಞೆ ಮೂಡುವ ಸಾಧ್ಯತೆಯಿದೆ. ಇಂತಹ ಇಬ್ಬಂದಿತನ ಮಾನಸಿಕ ಸ್ಥೈರ್ಯ ಕುಸಿಯಲು ಕಾರಣವಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಇದನ್ನು ತಪ್ಪಿಸಲು ಪ್ರಸ್ತುತ 20 ಮಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃ ಸ್ಥಿತಿ ಪತ್ತೆ ಮಾಡುವ ತರಪೇತಿ ನೀಡಿದ್ದೇವೆ. ಇವರೆಲ್ಲಾ ಮೆಂಟಾರ್ಗಳು. ಯುವಕರ ಮೇಲೆ ಸದಾ ನಿಗಾ ಇಟ್ಟಿರುತ್ತಾರೆ. ಅವರ ತದೇಕಚಿತ್ತತೆಯೇ ಇವರ ಗುರಿ. ಆದರಲ್ಲಿ ಕಿಂಚಿತ್ತು ಏರುಪೇರಾದರೂ ತಕ್ಷಣವೇ ಜಾಗೃತರಾಗಿ, ಯುವಕರು ವಿಚಲಿತರಾಗದಂತೆ ನೋಡಿಕೊಳ್ಳುತ್ತಾರೆ. ಮಾನಸಿಕ ಸ್ಥೈರ್ಯ ಹೆಚ್ಚಿಸಿ, ಉತ್ತಮ ಭವಿಷ್ಯ ಕಟ್ಟಿಕೊಡಲು ತಕ್ಕ ತರಪೇತಿ ಆಯೋಜಿಸುತ್ತಾರೆ.
ಒಬ್ಬ ಸಾಮಾನ್ಯ ನಾಗರಿಕನನ್ನು ದೇಶ ಕಾಯುವ ಯೋಧನಾಗಿ, ಶಕ್ತಿಯಾಗಿ ರೂಪಿಸುವುದು ಬಲು ನಾಜೂಕಿನ ಕೆಲಸ ಎಂಬುದನ್ನು ಆತ್ಮಹತ್ಯೆ ತಡೆಯುವ ಕೋರ್ಸು ಹೇಳಿಕೊಡುತ್ತಿದೆ.
(ಯುಎನ್ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications