ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೂರು ಜಿಲ್ಲೆಗಳ ಜಲಾನಯನ ಪ್ರದೇಶಾಭಿವೃದ್ಧಿಗೆಬ್ರಿಟನ್ ಸಹಾಯ
ನವದೆಹಲಿ : ರಾಜ್ಯದ ಚಿತ್ರದುರ್ಗ, ಬಳ್ಳಾರಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿನ ಜಲಾನಯನ ಪ್ರದೇಶಗಳ ಅಭಿವೃದ್ಧಿಗಾಗಿ ಬ್ರಿಟನ್ನ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ 95 ಕೋಟಿ ರೂಪಾಯಿಗಳ ನೆರವು ನೀಡಲು ಒಪ್ಪಿಕೊಂಡಿದೆ.
ಈ ವಿಷಯವನ್ನು ರಾಜ್ಯ ಕೃಷಿ ಸಚಿವ ಟಿ.ಬಿ. ಜಯಚಂದ್ರ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದು, ಯೋಜನೆಯ ಸಂಪೂರ್ಣ ಅನುಷ್ಠಾನವನ್ನು ಸರಕಾರೇತರ ಸಂಸ್ಥೆಗಳೇ ನೋಡಿಕೊಳ್ಳುತ್ತವೆ. ಇದಕ್ಕೆಂದೇ ‘ಕವಾರ್ಡ್’ ಸೊಸಾೖಟಿಯನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಬ್ರಿಟನ್ನ ಈ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಚೀನಾದಲ್ಲಿಯೂ ಕೆಲವು ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ನೆರವು ನೀಡುತ್ತಿದ್ದು, ಆ ಕುರಿತು ವಿವರವಾದ ಅಧ್ಯಯನ ಮಾಡಲು ಜೂನ್ ಮೂರರಂದು ತಾವು ಚೀನಾಕ್ಕೆ ಪ್ರವಾಸ ಹೋಗಲಿರುವುದಾಗಿಯೂ ಜಯಚಂದ್ರ ವಿವರಿಸಿದರು.
(ಇನ್ಫೋ ವಾರ್ತೆ)
Comments
Story first published: Thursday, May 31, 2001, 5:30 [IST]