ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಮೇಶ್ ಬಂಗೇರರ ತುಳು ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ
ಮಂಗಳೂರು : ಮಂಗಳೂರಿನ ತುಳು ಸಾಹಿತಿ ಉಮೇಶ ಬಂಗೆರ ಕುಡ್ಲ ಅವರ ಶಿಲ್ಪೊ - ಶಿವಾನಿ ಎಂಬ ತುಳು ಕಾದಂಬರಿ ಪ್ರತಿಷ್ಟಿತ ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ತುಳು ಕೂಟ ಉಡುಪಿ, ತುಳು ಕೂಟ ದುಬೈ ಅವರ ಸಹಯೋಗದೊಂದಿಗೆ ಪ್ರತಿವರ್ಷದಂತೆ ಈ ವರ್ಷವೂ ಎಸ್. ಯು. ಪಣಿಯಾಡಿ ಪ್ರಶಸ್ತಿಗಾಗಿ ಸ್ಪರ್ಧೆಯನ್ನೇರ್ಪಡಿಸಿದ್ದು, ತುಳು ಬರಹಗಾರ, ನಾಟಕ ರಚನಾಕಾರ , ನಾಟಕ ನಿರ್ದೇಶಕ, ಹಾಗೂ ಗಾಯಕರಾಗಿ ಪ್ರಸಿದ್ಧರಾಗಿರುವ ಉಮೇಶ ಬಂಗೇರ ಅವರ ಶಿಲ್ಪೋ - ಶಿವಾನಿ ತುಳು ಕಾದಂಬರಿಯ ಹಸ್ತಪ್ರತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿಯು 5000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಸದ್ಯದಲ್ಲಿಯೇ ಕಾದಂಬರಿ ಮುದ್ರಣಗೊಳ್ಳಲಿದ್ದು, ಆನಂತರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಟ್ಟುಕೊಳ್ಳಲಾಗುವುದು.
(ಇನ್ಫೋ ವಾರ್ತೆ)
Comments
Story first published: Saturday, May 26, 2001, 5:30 [IST]