ಬೆಂಗಳೂರಿನ ಅಲಸೂರು ಕೆರೆಯಲ್ಲಿ ವೀರ ಯೋಧರ ಸಮರ !
ಬೆಂಗಳೂರು : ಎಂ.ಇ.ಜಿ.ಯ ವೀರಯೋಧರು ಈ ಹೊತ್ತು ಬೆಂಗಳೂರಿನ ಐತಿಹಾಸಿಕ ಅಲಸೂರು ಕೆರೆಯಲ್ಲಿ ಸಮರ ನಡೆಸುತ್ತಿದ್ದಾರೆ. ಏನು! ಕೆರೆಯಲ್ಲಿ ಯುದ್ಧವೇ ಎಂದು ಅಚ್ಚರಿಪಡಬೇಡಿ. ಇದು ಕಳೆ ಕೀಳುವ ಸಮರ. ಅಲಸೂರು ಕೆರೆಯ ಸೌಂದರ್ಯಕ್ಕೇ ಮಾರಕವಾಗಿ, ಈ ಪ್ರದೇಶದ ಜನರ ಆರೋಗ್ಯ ಹಾಳು ಮಾಡುತ್ತಿದ್ದ ಕಳೆಯನ್ನು ಶನಿವಾರದಿಂದ ಕಿತ್ತೊಗೆಯಲಾಗುತ್ತಿದೆ.
ಕತ್ತೆ ಕಿವಿಯಂತೆ ಕಾಣುವ ಹಾಗೂ ಕತ್ತೆ ಕಿವಿ ಸೊಪ್ಪು ಎಂದೇ ಹೆಸರಾದ ಹೈಯಾಸಿಂತ್ ಎಂಬ ಹಸಿರು ಕಳೆ ಅಲಸೂರು ಕೆರೆಯನ್ನೆಲ್ಲಾ ಆವರಿಸಿಬಿಟ್ಟಿದೆ. ಈಗ ಪಾಲಿಕೆಯ ಸಹಯೋಗದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ನ 4000 ಸೈನಿಕರು ಈ ಕಳೆ ಕೀಳುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಶನಿವಾರ ಬೆಳಗ್ಗೆ 8ಗಂಟೆಗೆ ಆರಂಭವಾದ ಈ ಸಮರೋಪಾದಿಯ ಕಾರ್ಯಾಚರಣೆ ಭಾನುವಾರ ಸಂಜೆ 6-30ರವರೆಗೂ ನಿರಂತರವಾಗಿ ನಡೆಯಲಿದೆ. ಸೈನಿಕರು ಮೂರು ಪಾಳಿಯಲ್ಲಿ ಕೆಲಸ ಮಾಡಿ ಹಗಲಿರುಳನ್ನೂ ಲೆಕ್ಕಿಸದೆ ಈ ಕಳೆಯನ್ನು ಸಂಪೂರ್ಣ ಮೂಲೋತ್ಪಾಟನೆ ಮಾಡಲಿದ್ದಾರೆ.
ದೋಣಿಗಳಲ್ಲಿ ಕೆರೆಗಳಿದು ಕಳೆಯನ್ನು ಹೊರಕ್ಕೆ ಸಾಗಿಸಲಾಗುತ್ತಿದೆ. ಕಳೆ ಕೀಳಲು ಜೆ.ಸಿ.ಬಿ.ಗಳ ನೆರವನ್ನೂ ಪಡೆಯಲಾಗಿದೆ. ಸುಮಾರು 40 ಟ್ರಕ್ಗಳು ಹಾಗೂ 15 ಲಾರಿಗಳು ಈ ಕಳೆಯನ್ನು ಸಾಗಿಸುವ ಕಾರ್ಯದಲ್ಲಿ ನಿರತವಾಗಿವೆ. ಈ ಕಾರ್ಯದ ಮೇಲುಸ್ತುವಾರಿಯನ್ನು ಎಂಇಜಿ ಬ್ರಿಗೆಡಿಯರ್ ವಿಜಯ್ ಪವಾರ್ ಹಾಗೂ 50ಕ್ಕೂ ಹೆಚ್ಚು (ಆರೋಗ್ಯ ಇಲಾಖೆ) ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಇಂದಿರಾನಗರ ಬಳಿಯ ಕದರನಪಾಳ್ಯದ ಗುಂಡಿಗೆ ಈ ಕಳೆಯನ್ನು ತಂದು ಹಾಕಲಾಗುತ್ತಿದೆ.
ಪ್ರತಿಭಟನೆ : ಈಗಾಗಲೇ ಸುಮಾರು 1000 ಲೋಡ್ ಕಳೆಯನ್ನು ಸಾಗಿಸಲಾಗಿದ್ದು, ಭಾನುವಾರ ಸಂಜೆಯ ಹೊತ್ತಿಗೆ ಕೆರೆ ಸಂಪೂರ್ಣ ಸ್ವಚ್ಛವಾಗುವ ಆಶ್ವಾಸನೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕದರನಪಾಳ್ಯದ ಜನತೆ ಕಳೆಯನ್ನು ತಮ್ಮ ಪ್ರದೇಶಕ್ಕೆ ತಂದು ಹಾಕುತ್ತಿರುವ ಬಗ್ಗೆ ಪ್ರತಿಭಟನೆಯನ್ನೂ ನಡೆಸಿದರು. ಅಧಿಕಾರಿಗಳು ಈ ಕಳೆಯ ಮೇಲೆ ಕೀಟನಾಶಕ ಸಿಂಪಡಿಸಿ, ಮಣ್ಣು ಹಾಕಿ ಮುಚ್ಚುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಪ್ರತಿಭಟನಕಾರರಿಗೆ ಸಮಾಧಾನಪಡಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications