ಮುಂದುವರಿದ ಹಾವಳಿ, ಏಳು ಜನರಿಗೆಮಂಗಮಾನವನಿಂದ ಗಾಯ
ನವದೆಹಲಿ : ನಿಗೂಢ ಮಂಗ ಮಾನವನ ಹಾವಳಿ ರಾಜಧಾನಿಯಲ್ಲಿ ಮುಂದುವರಿದಿದ್ದು , ಶುಕ್ರವಾರ ರಾತ್ರಿ ಮತ್ತೆ ಏಳು ಮಂದಿ ಮಂಗ ಮಾನವನ ಹಾವಳಿಯಿಂದ ಗಾಯಗೊಂಡಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಮಾನಿಯ ಮೇಲೆ ಪೊಲೀಸರು ಬಂಧಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು , ಈವರೆಗೆ 12 ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಸಹ ಆಯುಕ್ತ ಸುರೇಶ್ ರಾಯ್, ಪೊಲೀಸ್ ಕಂಟ್ರೋಲ್ ರೂಂಗೆ ಶನಿವಾರ ಬೆಳಿಗ್ಗೆ 48 ಕರೆಗಳು ಬಂದಿದ್ದು , ಅವುಗಳಲ್ಲಿ 42 ಕರೆಗಳು ಸುಳ್ಳು ಕರೆಗಳಾಗಿದ್ದವು ಎಂದರು. ಪಶ್ಚಿಮ ದೆಹಲಿಯಲ್ಲಿ ಗಾಯಗೊಂಡಿರುವ ಆರು ಜನರು ಕಪ್ಪು ಕರಡಿ ದಾಳಿ ನಡೆಸಿತೆಂದು ತಿಳಿಸಿದ್ದಾರೆ. ಎಲ್ಲರಿಗೂ ತರಚು ಗಾಯಗಳಾಗಿವೆ.
ಈ ನಡುವೆ ವದಂತಿಗಳನ್ನು ಹಬ್ಬಿಸುತ್ತಿವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಠಿಣ ಎಚ್ಚರಿಕೆ ನೀಡಿರುವ ಪೊಲೀಸರು, ವದಂತಿಗಳು ಹೆಚ್ಚಿರುವ ಪ್ರದೇಶಗಳಾದ ಗೀತಾ ಕಾಲೋನಿ, ಗಾಂಧಿ ನಗರ, ಫರ್ಶ್ ಬಜಾರ್, ಶಾಕರ್ ಪುರ್, ಪ್ರೀತ್ ವಿಹಾರ್ ಮುಂತಾದೆಡೆ ಪಥ ಸಂಚಲನೆ ನಡೆಸಿದ್ದಾರೆ. ಪರಿಸ್ಥಿತಿಯ ನಿಯಂತ್ರಕ್ಕಾಗಿ ರಾಜಧಾನಿಯ ಸಂಪೂರ್ಣ ಪೊಲೀಸ್ ಪಡೆ ಕಟ್ಟೆಚ್ಚರದಲ್ಲಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...