ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಸಂಘಟಿತ ಕಾರ್ಮಿಕರಿಗೆ ಜುಲೈನಿಂದ ‘ಸಾಮಾಜಿಕ ಸುರಕ್ಷತಾ ಯೋಜನೆ’
ನವದೆಹಲಿ : ದೇಶದಲ್ಲಿನ 12 ಕೋಟಿ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಮಾಜಿಕ ಸುರಕ್ಷತಾ ಯೋಜನೆಯನ್ನು ಪ್ರಧಾನಿ ವಾಜಪೇಯಿ ಶುಕ್ರವಾರ ಪ್ರಕಟಿಸಿದರು.
37 ನೇ ಭಾರತೀಯ ಕಾರ್ಮಿಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಪ್ರಧಾನಿ, ಇದೇ ವರ್ಷದ ಜುಲೈ ತಿಂಗಳಿಂದ ನೂತನ ಯೋಜನೆ ಜಾರಿಗೆ ಬರುವುದಾಗಿ ಘೋಷಿಸಿದರು. ಪ್ರಾರಂಭದಲ್ಲಿ 150 ಕೋಟಿ ರುಪಾಯಿಗಳನ್ನು ಯೋಜನೆಯಲ್ಲಿ ತೊಡಗಿಸಲಾಗುವುದು. ಅಸಂಘಟಿತ ವಲಯದ ಕಾರ್ಮಿಕರಿಗೆ ವಿಮೆ ಹಾಗೂ ಪಿಂಚಣಿ ಸೌಲಭ್ಯ ಈ ಯೋಜನೆಯಡಿ ದೊರೆಯಲಿದೆ ಎಂದು ವಾಜಪೇಯಿ ಹೇಳಿದರು.
ಅಸಂಘಟಿತ ವಲಯವು ಸಾಮಾನ್ಯವಾಗಿ ಭೂಮಿ ರಹಿತ ಕೃಷಿಕರನ್ನು ಒಳಗೊಂಡಿದೆ. ವಿತ್ತ ಸಚಿವ ಯಶವಂತ ಸಿನ್ಹಾ ತಮ್ಮ ಆಯವ್ಯಯ ಭಾಷಣದಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿದುದನ್ನು ವಾಜಪೇಯಿ ನೆನೆದರು.
(ಯುಎನ್ಐ)
Story first published: Friday, May 18, 2001, 5:30 [IST]