ನಂಜುಂಡ ನಗುತಾನೆ ! ಶ್ರೀಕಂಠ ದೇಗುಲದ ಜೀರ್ಣೋದ್ಧಾರ ನಡೀತಿದೆ
ಮೈಸೂರು : ನಂಜನಗೂಡು ಶ್ರೀಕಂಠನ ದರ್ಶನವಿಲ್ಲದೆ ಮೈಸೂರು ಟೂರಿನ ಪ್ಲಾನ್ ಪೂರ್ಣವಾಗುವುದಿಲ್ಲ ಅಲ್ವೇ ? ರಾಜ್ಯದ ಅತ್ಯಂತ ದೊಡ್ಡ ದೇವಸ್ಥಾನವೆನ್ನುವ ದಾಖಲೆ ಶ್ರೀಕಂಠನದು ಎನ್ನುತ್ತಿವೆ ದಾಖಲೆ ಪುಸ್ತಕಗಳು. ಇಂಥಾ ಶ್ರೀಂಕಠನ ದೇಗುಲಕ್ಕೀಗ ಜೀರ್ಣೋದ್ಧಾರದ ಭಾಗ್ಯವೊದಗಿ ಬಂದಿದೆ.
ಮೈಸೂರಿನ ಆರ್ಕಿಯಾಲಜಿ ವಿಭಾಗ ಜೀಣೋದ್ಧಾರದ ಉಸ್ತುವಾರಿ ವಹಿಸಿಕೊಂಡಿದೆ. ಕಪಿಲಾ ನದಿ ದಡದಲ್ಲಿರುವ ಈ ದೇವಸ್ಥಾನ ದ್ರಾವಿಡ ಶೈಲಿಯಲ್ಲಿದೆ. ಈಶ್ವರನಿಗೆ ಇಲ್ಲಿ ಲಿಂಗರೂಪದಲ್ಲಿ ಪೂಜೆ. ಪಾರ್ವತಿ ಮತ್ತು ನಾರಾಯಣ ದೇವರ ಮೂರ್ತಿಗಳಿಗೆ, ಏಳು ಹೆಡೆಯ ಹಾವಿನಡಿ ನವಿಲು ವಾಹನನಾದ ಸುಬ್ರಹ್ಮಣ್ಯ ದೇವರಿಗೆ ಜೀಣೋದ್ಧಾರ ಸಮಯದಲ್ಲಿ ಹೊಸ ರೂಪು ಕೊಡಲಾಗುವುದು. ಒಳಾಂಗಣದಲ್ಲಿ ಲೋಹದ ಮತ್ತು ಕಲ್ಲಿನ ಹಲವಾರು ದೇವರ ಮೂರ್ತಿಗಳನ್ನು ಅದೇ ಶೈಲಿಯಲ್ಲಿ ಆದರೆ ಉತ್ತಮಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲು ನಿರ್ಧರಿಸಲಾಗಿದೆ.
ಈ ದೇವಸ್ಥಾನಕ್ಕೆ ಎಲ್ಲ ಭಕ್ತರಿಗೆ ಪ್ರವೇಶವಿದೆ. ಮಹಾ ಶಿವರಾತ್ರಿಯಂದು ಇಲ್ಲಿ ವಿಶೇಷ ಹಬ್ಬ, ಪೂಜೆ ಇರುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಸ್ಥಾನದ ಹತ್ತಿರದಲ್ಲಿ ಹರಿಯುವ ಕಪಿಲಾ ನದಿಗೆ ಕೂದಲು ಅರ್ಪಿಸುವುದು ಉಂಟು.
ಸೋ, ಮುಂದಿನ ಟ್ರಿಪ್ ಮೈಸೂರಿಗಾ ?
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...