ಕಾರವಾರ ಕಡಲತೀರಕ್ಕೆ ಟಾಗೋರ್ ಹೆಸರು! ನೀವೇನಂತೀರಿ?
ಕಾರವಾರ : ಕಾರವಾರದ ಕಡಲ ತೀರಕ್ಕೆ ರವೀಂದ್ರನಾಥ್ ಟಾಗೋರ್ ಅವರ ಹೆಸರಿಡಲು ಅಲ್ಲಿನ ಜಿಲ್ಲಾಡಳಿತ ನಿರ್ಧರಿಸಿದ್ದು , ಈ ಕುರಿತು ಸಾರ್ವಜನಿಕರ ಆಭಿಪ್ರಾಯಗಳನ್ನು ಜಿಲ್ಲಾಧಿಕಾರಿ ನಿಲಯ ಮಿತಾಶ್ ಕೋರಿದ್ದಾರೆ.
ಟಾಗೋರ್ ಅವರ ತಮ್ಮ ಸತ್ಯೇಂದ್ರನಾಥ್ ಟಾಗೋರ್ ಅವರು 1882- 83ರ ಅವಧಿಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಯಾಗಿದ್ದಾಗ, ರವೀಂದ್ರನಾಥ ಟಾಗೋರ್ ಕಾರವಾರ ಬೀಚಿಗೆ ಭೇಟಿ ನೀಡಿದ್ದರು. ತಮ್ಮ 22 ನೆ ವಯಸ್ಸಿನಲ್ಲಿ ಅವರು ಬರೆದ ಪ್ರಕೃತಿರ್ ಪ್ರೊತಿಶೋಧ್ ಎಂಬ ಕವನಕ್ಕೆ ಕಾರವಾರದ ಬೀಚ್ ಸ್ಫೂರ್ತಿಯಾಗಿತ್ತಂತೆ.
ಅಂದ ಹಾಗೆ ಕಾರವಾರ ಬೀಚ್ಗೆ ಈಗ ಹೊಸ ಕಳೆ ಬಂದಿದೆ. ಅಲ್ಲಿ ಕಡಲ ವಿಸ್ಮಯಕಾರಿ ಸೌಂದರ್ಯದೊಂದಿಗೆ, ಸಂಗೀತ ಕಾರಂಜಿ, ಅಮ್ಯೂಸ್ಮೆಂಟ್ ಪಾರ್ಕ್ ಮತ್ತು ಪ್ಲಾನಿಟೋರಿಯಂ ಕೂಡ ಇದೆ. ಅಲ್ಲದೆ ಪ್ರತಿ ದಿನ ಮನೋರಂಜನಾ ಕಾರ್ಯಕ್ರಮಗಳು ಮತ್ತು ಬೀಚ್ ಸ್ಪೋಟ್ಸ್ಗಳನ್ನು ಆಯೋಜಿಸಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಕರ್ನಾಟಕದ
ಬೀಚ್ಗಳು
What do you think about this story
ಮುಖಪುಟ / ಇವತ್ತು... ಈ ಹೊತ್ತು...