Get Updates
Get notified of breaking news, exclusive insights, and must-see stories!

‘ಅಮೇರಿಕೆಯಲ್ಲಿನ ಐಟಿ ತಜ್ಞರ ವಾಪಸ್ಸಾತಿಗೆ ಆತಂಕ ಬೇಕಿಲ್ಲ ’

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸ್ತುತ ಕಂಡುಬರುತ್ತಿರುವ ಹಿನ್ನಡೆ ತಾತ್ಕಾಲಿಕ. ಈ ಬೆಳವಣಿಗೆ ಮಾಹಿತಿ ತಂತ್ರಜ್ಞಾನ ಉದ್ಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ಅಮೇರಿಕೆಯಲ್ಲಿನ ಐಟಿ ತಜ್ಞರು ಭಾರತಕ್ಕೆ ವಾಪಸ್ಸಾಗುತ್ತಿರುವ ಬಗ್ಗೆ ಆತಂಕ ಪಡಬೇಕಾಗಿಲ್ಲ. ಪ್ರತಿದಿನವೂ ಬೆಳವಣಿಗೆ ಹೊಂದುತ್ತಿರುವ ಐಟಿ ಉದ್ಯಮ ಈ ಹಿನ್ನಡೆಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ವೃತ್ತಿಪರ ಇಂಜಿನಿಯರ್‌ಗಳ ಬೇಡಿಕೆ ಯಾವತ್ತಿಗೂ ಕುಗ್ಗುವುದಿಲ್ಲ ಎಂದು ಪರಮೇಶ್ವರ್‌ ಹೇಳಿದರು. ಸಣ್ಣ ಕೈಗಾರಿಕಾ ಸೇವಾ ಸಂಸ್ಥೆ ಹಾಗೂ ಸಿಸ್ಟೆಲ್‌ ಕಂಪ್ಯೂಟರ್‌ ಶಿಕ್ಷಣ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ಸ್ವಯಂ ಉದ್ಯೋಗ ಯೋಜನೆ ಮತ್ತು ನೈಪುಣ್ಯ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

2008 ರ ವೇಳೆಗೆ ದೇಶದಲ್ಲಿ 22.5 ಲಕ್ಷ ಇಂಜಿನಿಯರ್‌ಗಳಿಗೆ ಬೇಡಿಕೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹೆಚ್ಚಿನ ವೃತ್ತಿಪರರನ್ನು ರೂಪಿಸಲು ಪ್ರಯತ್ನಿಸಲಿದೆ ಎಂದರು. ತರಬೇತಿಯಿಲ್ಲದ ಪದವಿಗಳು ಸಾಮಾಜಿಕವಾಗಿ ಹಾಗೂ ವೈಯಕ್ತಿಕವಾಗಿ ಉಪಯುಕ್ತವಲ್ಲ . ಹೆಚ್ಚಿನ ಆದಾಯ ತರುವ ಕಂಪ್ಯೂಟರ್‌ ಶಿಕ್ಷಣ ಕಲಿಕೆ ಅಗತ್ಯ ಎಂದು ಪರಮೇಶ್ವರ್‌ ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಬೆಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ಪ್ರೊ.ಟಿ. ಶಿವಣ್ಣ ಸ್ವಯಂ ಉದ್ಯೋಗ ಯೋಜನೆಯಡಿ ತರಬೇತಿ ಪಡೇದವರಿಗೆ ಪ್ರಶಸ್ತಿಪತ್ರ ವಿತರಿಸಿದರು. ಎಸ್‌ಐಎಸ್‌ಐ ನಿರ್ದೇಶಕ ಎಂ. ಮಹಾಬಲ, ಉಪ ನಿರ್ದೇಶಕ ಸಿ.ಆರ್‌.ಬದರಿನಾಥ್‌ ಹಾಗೂ ಸಿಸ್ಟೆಲ್‌ನ ನಿರ್ದೇಶಕ ಎನ್‌.ಮುರಳೀಧರ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+