ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀಸಣಿಗೆಗೇ ಶರಣು ಹೊಡೆಯೋಣ !
ಬೆಂಗಳೂರು : ಎಲ್ಲರ ಮನೆಯಲ್ಲೂ ಎ.ಸಿ. ಎಲ್ಲಿರತ್ತೇ ಹೇಳಿ? ಫ್ಯಾನ್ ಹಾಕಿದರೂ ಬಿಸಿ ಗಾಳಿಯೇ ಬೀಸುತ್ತಿದೆ. ಕರೆಂಟ್ ಬೇರೆ ಕೈಕೊಡುತ್ತಿದೆ. ಕೊನೆಗೆ ಬೀಸಣಿಗೆಯೇ ಗಟ್ಟಿ. ಜತೆಗೆ ಸೊಳ್ಳೆಯ ಕಾಟ ಬೇರೆ. ಸೊಳ್ಳೆಪರದೆ ಕಟ್ಟಿದರಂತೂ ಸೆಕೆ ಮತ್ತಷ್ಟು ಹೆಚ್ಚತ್ತೆ. ಸೂರ್ಯನಿಗೆ ಹಿಡಿಶಾಪ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅಂದಹಾಗೆ ರಾಜ್ಯದಲ್ಲಿ ಕೂಡ ಬಿಸಿಲು ಏರುತ್ತಿದೆ. ಒಳನಾಡಿನಲ್ಲಿ ಹಾಗೂ ಕರಾವಳಿಯಲ್ಲಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತಲೂ ಅಧಿಕವಾಗಿತ್ತು. ರಾಜ್ಯದ ಅತಿ ಹೆಚ್ಚು ಉಷ್ಣಾಂಶ ರಾಯಚೂರು ಹಾಗೂ ಗುಲ್ಬರ್ಗಾದಲ್ಲಿ ದಾಖಲಾಗಿತ್ತು. ಅಲ್ಲಿ ದಿನದ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ಇತ್ತು.
ಮುನ್ಸೂಚನೆಯಂತೆ ಮಳೆ ರಾಜ್ಯದಲ್ಲಿ ಸುಳಿಯುವ ಲಕ್ಷಣ ಇಲ್ಲ. ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೂಡ ಮುಖ್ಯವಾಗಿ ಶುಭ್ರ ಆಕಾಶ ಇದ್ದು, ದಿನದ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದೆ.
Comments
Story first published: Monday, May 14, 2001, 5:30 [IST]