ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿಯಿಂದ ಕಾಂಗ್ರೆಸ್ಸಿನ ನಿರಂಜನ ವಿಧಾನಪರಿಷತ್ತಿಗೆ ಆಯ್ಕೆ
ಬಳ್ಳಾರಿ : ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕ್ಷೇತ್ರದಿಂದ ವಿಧಾನಪರಿಷತ್ತಿನ ಒಂದು ಕ್ಷೇತ್ರಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ಕೆ. ನಿರಂಜನ ನಾಯ್ಡು ಆಯ್ಕೆಯಾಗಿದ್ದಾರೆ.
ಸಮೀಪದ ಎದುರಾಳಿ ಸಂಯುಕ್ತ ಜನತಾದಳದ ಹುರಿಯಾಳು ಡಾ.ಕೆ.ಬಿ. ಬಸಪ್ಪ ಅವರಿಗಿಂತ 1,533 ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ನಿರಂಜನ ಸುಲಭ ಗೆಲುವನ್ನು ದಾಖಲಿಸಿದರು. ನಿರಂಜನ ಅವರು 2343 ಮತಗಳನ್ನು ಪಡೆದರೆ, ಸಂಯುಕ್ತ ಜನತಾದಳದ ಬಸಪ್ಪ ನವರಿಗೆ 810 ಮತಗಳು ದೊರಕಿವೆ. ಕಳಪೆ ಸಾಧನೆಗೈದಿರುವ ಬಿಜೆಪಿಯ ಡಿ. ಎರ್ರಿಸ್ವಾಮಿ ಕೇವಲ 105 ಮತಗಳನ್ನು ಪಡೆದಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Monday, May 14, 2001, 5:30 [IST]