Get Updates
Get notified of breaking news, exclusive insights, and must-see stories!

ನಿದ್ದೆ ಮಾಡುವ ಅಧಿಕಾರಿಗಳನ್ನು ಬಡಿದೆಬ್ಬಿಸಲು ಕೃಷ್ಣರ ನಾರದ ಸಂಚಾರ

ಬೆಂಗಳೂರು : ಶಾಸಕರಾಗಿ ಆಯ್ಕೆ ಆದವರು, ತಮ್ಮ ಕ್ಷೇತ್ರದಲ್ಲಿ ಸಂಚರಿಸಿ, ಜನರ ಕಷ್ಟ ಸುಖ ಅರಿತು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದವರು, ಜಿಲ್ಲೆಯಾದ್ಯಂತ ಸುತ್ತಾಡಬೇಕು. ಇನ್ನು ಮುಖ್ಯಮಂತ್ರಿಗಳು ರಾಜ್ಯವನ್ನೇ ಪ್ರದಕ್ಷಿಣೆ ಮಾಡಬೇಕು.

ಈಗ ನಮ್ಮ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರೂ ಇದೇ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರನ್ನು ಸಿಂಗಪೂರ್‌ ಮಾದರಿಯ ಹೈಟೆಕ್‌ ಸಿಟಿ ಮಾಡಬೇಕೆಂಬ ಕನಸು ಕಟ್ಟಿರುವ ಕೃಷ್ಣ, ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ತೀವ್ರ ಚಾಲನೆ ನೀಡುವ ಸಲುವಾಗಿ ಮೇ 20ರ ಭಾನುವಾರದಿಂದ ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ.

ಈ ಸಂಬಂಧ ಅವರು, ಸೋಮವಾರ ಬೆಂಗಳೂರಿನ ಶಾಸಕರೊಂದಿಗೆ ಚರ್ಚೆ ನಡೆಸಿದರು. 20ರಂದು ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಅವರು, ನಡೆಯುತ್ತಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರವನ್ನೂ ಸೂಚಿಸಲಿದ್ದಾರೆ. ವರ್ಷದ ಹಿಂದೆ ಕೂಡ ಮುಖ್ಯಮಂತ್ರಿಗಳು ಒಮ್ಮೆ ನಗರ ಪ್ರದಕ್ಷಿಣೆ ಮಾಡಿ, ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದರು.

ತಾವು ಅಂದು ನೀಡಿದ ಸೂಚನೆಗಳು ಕಾರ್ಯಗತವಾಗಿವೆಯೇ ಇಲ್ಲವೇ ಎಂಬುದನ್ನು ಅವರು ಪರಿಶೀಲಿಸಲಿದ್ದಾರೆ. 20 ರಂದು ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದಾರೆ ಎಂಬ ಸುದ್ದಿ ತಿಳಿದ ಅಧಿಕಾರಿಗಳು ಇನ್ನೊಂದು ವಾರ ನಿದ್ದೆಗೆಡುವುದು ಖಚಿತ. ಪಾಲಿಕೆಯ ಕೆಲವು ಅಧಿಕಾರಿಗಳು ಸೋಮವಾರವೇ, ಕೆ.ಆರ್‌. ಮಾರ್ಕೆಟ್‌ ಇತರ ಪ್ರದೇಶಗಳಿಗೆ ಭೇಟಿ ನೀಡಿ, ಪ್ರದೇಶವನ್ನು ಶುಚಿಯಾಗಿಡುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+