ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ : ಗಾಡಿಯಲ್ಲಿನ ಮೂವರ ಸಾವು
ಹಾಸನ : ಸಂತೆಗೆ ಹೋಗುತ್ತಿದ್ದ ಎತ್ತಿನಗಾಡಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು, ಒಬ್ಬ ಬಾಲಕಿ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಚನ್ನರಾಯ ಪಟ್ಟಣದ ಶೆಟ್ಟಿಹಳ್ಳಿ ಸಮೀಪ ಭಾನುವಾರ ಸಂಭವಿಸಿದೆ.
ರೀಟಾ (5) ಸ್ಥಳದಲ್ಲಿಯೇ ಮೃತಳಾದರೆ, ಶಿವಲಿಂಗೇಗೌಡ (45) ಹಾಗೂ ರಂಗಮ್ಮ ಹತ್ತಿರದ ಆಸ್ಪತ್ರೆಯಾಂದರಲ್ಲಿ ಅಸು ನೀಗಿದ್ದಾರೆ. ಹೊಳೆಗೇರಿಯ ಸೋಮನಹಳ್ಳಿಯಿಂದ ಸಂತೆಗಾಗಿ ಎತ್ತಿನಗಾಡಿಯಲ್ಲಿ ಇವರೆಲ್ಲ ಸಂಚರಿಸುತ್ತಿದ್ದರು. ಶೆಟ್ಟಿಹಳ್ಳಿ ಬಳಿ ವೇಗವಾಗಿ ಬರುತ್ತಿದ್ದ ಬಸ್ಸು ಎತ್ತಿನಗಾಡಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಈ ದುರಂತ ಸಂಭವಿಸಿತು.
ನಂಜಮ್ಮ (35), ಪ್ರಮೀಳ (25), ಶಾಂತೇಗೌಡ (28), ರಮೇಶ್ ಹಾಗೂ ಯಶೋದಮ್ಮ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Monday, May 14, 2001, 5:30 [IST]