ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಾನ ಪ್ರವೇಶ ಶುಲ್ಕ ಕೈಬಿಟ್ಟುಉಸಿರು ಪಡೆದ ಬೆಂ.ಮ.ನ.ಪಾ.

By Staff
|
Google Oneindia Kannada News

ಬೆಂಗಳೂರು : ಸಾರ್ವಜನಿಕರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಉದ್ಯಾನವನಗಳಿಗೆ ಪ್ರವೇಶ ಶುಲ್ಕ ವಿಧಿಸುವ ತೀರ್ಮಾನವನ್ನು ಮಹಾನಗರ ಪಾಲಿಕೆ ಕೈಬಿಟ್ಟಿದೆ. ಅದೇ ರೀತಿ 100 ಜೀಪುಗಳನ್ನು ಕೊಳ್ಳುವ ಉದ್ದೇಶದಿಂದ ಹಿಂದೆ ಸರಿದಿರುವ ಪಾಲಿಕೆ, ಹೆಪಟೈಟಿಸ್‌-ಬಿ ಕಾಯಿಲೆ ನಿರೋಧಕ್ಕೆ 25 ಲಕ್ಷ ರುಪಾಯಿಗಳನ್ನು ಬಿಡುಗಡೆ ಮಾಡಿದೆ.

ಪಾಲಿಕೆಯ ಆಯವ್ಯಯ ಪತ್ರದ ಮೇಲೆ ಮೂರು ದಿನಗಳಿಂದ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ , 2001- 2002 ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದ ಉದ್ಯಾನಗಳ ಪ್ರವೇಶ ಶುಲ್ಕವನ್ನು ಕೈ ಬಿಡುವ ಅಗತ್ಯವನ್ನು ಆಡಳಿತ ಪಕ್ಷ ದ ಸದಸ್ಯರು ಮನಗಂಡಿದ್ದಾರೆ. ಇದೇರೀತಿ 50 ರುಪಾಯಿಗಳಿಂದ 250 ರು.ಗೆ ಏರಿಸಿದ್ದ ವಿದ್ಯುತ್‌ ಚಿತಾಗಾರದ ಶುಲ್ಕವನ್ನು 100 ರು.ಗೆ ಇಳಿಸಲಾಗಿದೆ. ಇದರಿಂದಾಗಿ ಪಾಲಿಕೆಯ ಬಜೆಟ್‌ ಅಂಗೀಕಾರದ ಹಾದಿ ಸುಗಮಗೊಂಡಿದೆ.

ಪಾಲಿಕೆ ತೆಗೆದುಕೊಂಡಿರುವ ಮತ್ತೊಂದು ಮಹತ್ವದ ನಿರ್ಣಯದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಿಗಿಂತ ಕೆಳದರ್ಜೆಯ ಅಧಿಕಾರಿಗಳಿಗೆ ನೀಡಿದ್ದ ವಾಹನ ಸೌಲಭ್ಯವನ್ನು ವಾಪಸ್ಸು ಪಡೆಯಲಾಗಿದೆ. ನಗರದ ನಾಗರಿಕರು ಹಾಗೂ ಬಿಜೆಪಿ ನಾಯಕರು ಉದ್ಯಾನಗಳಿಗೆ ಪ್ರವೇಶ ಶುಲ್ಕ ವಿಧಿಸುವ ಪಾಲಿಕೆಯ ನಿರ್ಧಾರವನ್ನು ತೀವ್ರವಾಗಿ ಪ್ರತಿಭಟಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X