ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಿರ್ಲೋಸ್ಕರ್ನ ಹರಿಹರ ಶಾಖೆ ಆರಂಭಿಸಲು ಸರಕಾರ ಸಿದ್ಧ
ದಾವಣಗೆರೆ : ಮೈಸೂರು ಕಿರ್ಲೋಸ್ಕರ್ ಕಂಪೆನಿಯ ಹರಿಹರ ಶಾಖೆಯನ್ನು ತೆರೆಯಲು ಸರಕಾರ ಸಿದ್ಧವಿದೆ ಎಂದು ಭಾರೀ ಕೈಗಾರಿಕೆ ಖಾತೆ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಸೋಮವಾರ, ಮೈಸೂರು ಕಿರ್ಲೋಸ್ಕರ್ ಘಟಕದ ನೌಕರರ ಮನವಿ ಪತ್ರ ಸ್ವೀಕರಿಸಿ ಮಾತನಾಡುತ್ತಾ ಅವರು, ಕಿರ್ಲೋಸ್ಕರ್ ಕಂಪೆನಿಯ ಹರಿಹರ ಘಟಕವನ್ನು ಆರಂಭಿಸಲು ಸರಕಾರ ಆಸಕ್ತವಾಗಿದ್ದಂತೆ ಕಂಪೆನಿಯ ಆಡಳಿತ ಮಂಡಳಿ ಉತ್ಸುಕವಾಗಿಲ್ಲ ಎಂದರು.
ಸರಕಾರವು ಮಾತುಕತೆಗಾಗಿ ಕರೆದಾಗ ಕಂಪೆನಿಯ ಮಾಲಕರು ಯಾವುದೇ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕಂಪೆನಿಯನ್ನು ಹರಾಜು ಹಾಕುವುದರಿಂದ ನೌಕರವರ್ಗದ ಸಮಸ್ಯೆ ಪರಿಹಾರವಾಗುವುದಿಲ್ಲ , ಬದಲಾಗಿ ಸಮಸ್ಯೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗಬೇಕು ಎಂದು ದೇಶಪಾಂಡೆ ಹೇಳಿದರು.
ಪ್ರಸ್ತುತ ಉಪ ಆಯುಕ್ತ ಕೆ. ಶಿವರಾಮ್ ಅವರಿಗೆ ಫ್ಯಾಕ್ಟರಿಯ ಸ್ಥಿತಿಗತಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಲಾಗಿದೆ. ವರದಿಯ ನಂತರ ಮುಂದಿನ ಕ್ರಮಗಳ ಬಗ್ಗೆ ಸರಕಾರ ಆಲೋಚಿಸುವುದು ಎಂದು ಅವರು ವಿವರಿಸಿದರು.
(ಇನ್ಫೋ ವಾರ್ತೆ)
Comments
Story first published: Tuesday, April 24, 2001, 5:30 [IST]