ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ವಿದ್ಯಾರ್ಥಿಗಳಿಗೆ ಶುಭದಿನ. ವ್ಯಾಪಾರದಲ್ಲಿ ಜಯ, ಬೇಡವೆಂದರೂ ಊರು ಸುತ್ತದೇ ವಿಧಿಯಿಲ್ಲ. ಪುಣ್ಯಕ್ಷೇತ್ರ ದರ್ಶನದಿಂದ ಲಾಭ.

ವೃಷಭ : ಕೈಯಿಟ್ಟ ಕೆಲಸಕ್ಕೆಲ್ಲಾ ಅಡ್ಡಿ ಆತಂಕ. ವಿಘ್ನೕಶ್ವರನ ಪೂಜೆ ಮಾಡಿ. ಶುಭವಾರ್ತೆ ಸಂಜೆಯಾಳಗೆ ಕಿವಿಗೆ ಬೀಳಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ.

ಮಿಥುನ : ಬಯಸಿದ್ದು ಬಗಲ ಜೋಳಿಗೆಗೇ ಬಂದು ಬೀಳಲಿದೆ. ಸಂಗಾತಿಯಾಂದಿಗೆ ಸರಸದ ದಿನ. ಮನೋರಂಜನೆಯಿಂದ ಮನೋಲ್ಲಾಸ.

ಕಟಕ : ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಬಂಧು- ಮಿತ್ರರ ಆಗಮನ, ಅನವಶ್ಯಕ ಖರ್ಚು. ವಿದ್ಯಾರ್ಥಿಗಳಿಗೆ ಹಿನ್ನಡೆ. ಭೂ ವ್ಯವಹಾರ ಬೇಡ ಸ್ವಾಮಿ.

ಸಿಂಹ : ಆರೋಗ್ಯ ಕೈಕೊಟ್ಟಿದೆ. ಮನಸ್ಸು ಚಂಚಲವಾಗಿದೆ. ಧ್ಯಾನದಿಂದ ಕೊಂಚ ಪರಿಹಾರ. ಹೊಸ ಯೋಜನೆಗಳಿಗೆ ಯಶಸ್ಸು ಕಟ್ಟಿಟ್ಟಬುತ್ತಿ.

ಕನ್ಯಾ : ಅನಗತ್ಯ ವಿವಾದಗಳು ತಲೆ ತಿನ್ನುತ್ತವೆ. ಮನೆಯಲ್ಲಿ ನೆಮ್ಮದಿ ಇಲ್ಲ. ಒಂದರ್ಧದಿನ ಹೊರಗೆ ಸುತ್ತಾಡಿಕೊಂಡು ಬನ್ನಿ. ಷೇರು ವ್ಯವಹಾರ ಬೇಡ.

ತುಲಾ : ವಿಪರೀತ ಕೆಲಸದ ನಡುವೆಯೂ ನಿಮ್ಮ ಸಾಧನೆಗೆ ಬೆಲೆ ಬರುತ್ತದೆ. ವ್ಯಾಪಾರದಲ್ಲಿ ಜಯ. ಪ್ರಯಾಣ ಇಂದು ಬೇಡ. ಏಕಾಗ್ರತೆ ಅಗತ್ಯ.

ವೃಶ್ಚಿಕ : ಮನಸ್ಸಿದ್ದರೆ ಮಾರ್ಗ, ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳದಿರಿ. ಮನಸ್ಸಿನ ಚಂಚಲತೆಗೆ ಕಡಿವಾಣಹಾಕಿ. ಜಯ ಸಿದ್ಧ.

ಧನಸ್ಸು : ನೀವು ವಿಶ್ರಾಂತಿ ಬಯಸಿದರೂ, ಅದು ನಿಮಗೆ ದೊರಕದು, ಕೆಲಸ ಬೆಟ್ಟದಷ್ಟಿದೆ. ಹೊಸ ಯೋಜನೆಗಳೂ ತಲೆ ತಿನ್ನಲಿವೆ. ಷೇರು ವ್ಯವಹಾರದಲ್ಲಿ ಭಾರಿ ಅನುಕೂಲ.

ಮಕರ : ಮನೆಯಲ್ಲಿ ಸಂತಸದ ವಾತಾವರಣ. ಪ್ರಯಾಣ ಸಂಭವ. ಸಂಜೆಯ ಸಂತೋಷ ಕೂಟದಿಂದ ಮನಸ್ಸಿಗೆ ಅಮಿತಾನಂದ.

ಕುಂಭ : ನಿಮ್ಮದು ಬರೀ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಅಂದುಕೊಂಡಿದ್ದನ್ನು ಮಾಡಿಯೇ ತೀರುತ್ತೀರಿ. ಕುಲದೇವರ ಶ್ರೀರಕ್ಷೆ ನಿಮಗಿದೆ. ಮನೆದೇವರ ದೇವಾಲಯಕ್ಕೆ ಹೋಗಲು ಮರೆಯದಿರಿ.

ಮೀನ : ವಿದ್ಯಾ ಪ್ರಗತಿ. ಕೆಲಸ ಹೆಚ್ಚು. ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇದೆ. ವ್ಯಾಪಾರಿಗಳಿಗೆ ಅನುಕೂಲ. ಷೇರು ವ್ಯಾಪಾರದಲ್ಲಿ ಧನಾಗಮ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X