Get Updates
Get notified of breaking news, exclusive insights, and must-see stories!

ಪ್ರತಿಪಕ್ಷ - ಆಡಳಿತ ಪಕ್ಷದ ನಡುವೆ ವಾಗ್ವಾದ, ಕಲಾಪಕ್ಕೆ ಅಡ್ಡಿ

ನವದೆಹಲಿ : ರಕ್ಷಣಾ ಇಲಾಖೆಗೆ ಸಂಬಂಧಿಸಿದ ತೆಹಲ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯ ತನಿಖೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿರುವ ಕಾಂಗ್ರೆಸ್‌ ಪಕ್ಷದ ಪ್ರತಿಭಟನೆಯಿಂದಾಗಿ ಮೂರನೇ ದಿನವಾದ ಬುಧವಾರ ಸಹ ಸಂಸತ್ತಿನ ಉಭಯ ಸದನಗಳ ಕಲಾಪ ನಡೆಯಲಿಲ್ಲ.

ಘೋಷಣೆ - ಪ್ರತಿ ಘೋಷಣೆ ಲೋಕಸಭೆಯಲ್ಲಿ ಮಾರ್ದನಿಸಿತು. ಕಾಂಗ್ರೆಸ್‌ ಸದಸ್ಯರು ತಮ್ಮ ಪಟ್ಟು ಸಡಿಲಿಸಲು ಸಿದ್ಧರಿರಲಿಲ್ಲ. ಈ ಹಂತದಲ್ಲಿ ಲೋಕಸಭಾಧ್ಯಕ್ಷ ಜಿ.ಎನ್‌.ಸಿ. ಬಾಲಯೋಗಿ ಅವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ರಾಜ್ಯಸಭೆಯಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮೊದಲು ಮಧ್ಯಾಹ್ನದವರೆಗೆ ಮುಂದೂಡಲಾಗಿದ್ದ ಕಲಾಪವನ್ನು ಕೃಷ್ಣಕಾಂತ್‌ ಅವರು ಗುರುವಾರಕ್ಕೆ ಮುಂದೂಡಿದರು.

ಕಾಂಗ್ರೆಸ್‌ ಹಾಗೂ ರಾಷ್ಟ್ರೀಯ ಜನತಾದಳ ಸದಸ್ಯರು ಜಂಟಿ ಸಂಸದೀಯ ಸಮಿತಿ ತನಿಖೆಗೆ ಆಗ್ರಹಿಸಿದರು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಬಿರುಸಿನ ಮಾತುಕತೆ - ವಾಗ್ವಾದ ಅರಂಭವಾಯಿತು. ಕಲಾಪಕ್ಕೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಸದನಗಳ ಮುಂದೂಡಿಗೆ ಅನಿವಾರ್ಯವಾಯಿತು.

ಸಂಸತ್‌ ಕಲಾಪಗಳು ಸುಗಮವಾಗಿ ನಡೆಯುಂತೆ ಮಾಡಲು ಲೋಕಸಭಾಧ್ಯಕ್ಷ ಬಾಲಯೋಗಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಅವರು ನಡೆಸಿದ ಸರ್ವಪಕ್ಷ ಸಭೆ ಕೂಡ ಫಲನೀಡಿಲ್ಲ ಎಂದು ವರದಿಯಾಗಿದೆ. ಇತರ ಪ್ರತಿಪಕ್ಷಗಳು ಸಹಕರಿಸುವ ಭರವಸೆ ನೀಡಿದ್ದರೂ, ಕಾಂಗ್ರೆಸ್‌ ಮಾತ್ರ ತನ್ನ ನಿಲುವು ಬದಲಿಸಿಕೊಳ್ಳಲು ಸಿದ್ಧವಿಲ್ಲ. ಸಂಸತ್‌ ಕಲಾಪ ಸುಗಮವಾಗಿ ನಡೆಸುವ ಪ್ರಯತ್ನಗಳು ಮಾತ್ರ ಮುಂದುವರಿದೇ ಇವೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+