ಕಲಾಪ ಮುಳುಗಿಸಿದ ಕಾಂಗ್ರೆಸ್ : ಉಭಯ ಸದನ ಮುಂದೂಡಿಕೆ
ನವದೆಹಲಿ : ತೆಹಲ್ಕಾ ಬಯಲು ಮಾಡಿರುವ ರಕ್ಷಣಾ ಹಗರಣಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆನ್ನುವ ಒತ್ತಾಯವನ್ನು ಪ್ರಧಾನಿ ವಾಜಪೇಯಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ , ಕಾಂಗ್ರೆಸ್ ಸದಸ್ಯರು ಎಬ್ಬಿಸಿದ ಭಾರೀ ಕೋಲಾಹಲದ ಕಾರಣ ಉಭಯ ಸದನಗಳು ಬುಧವಾರಕ್ಕೆ ಮುಂದೂಡಿವೆ.
ತೆಹಲ್ಕಾದ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕೆನ್ನುವ ಕಾಂಗ್ರೆಸ್ನ ಒತ್ತಾಯವನ್ನು ಪ್ರಧಾನಿ ವಾಜಪೇಯಿ ಸಾರಾಸಗಟಾಗಿ ತಿರಸ್ಕರಿದಾಗ, ರೊಚ್ಚಿಗೆದ್ದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಧುಮುಕಿ ಪ್ರತಿಭಟನೆ ನಡೆಸಿದರು. ಸಭಾನಾಯಕ ಜಿಎಂಸಿ ಬಾಲಯೋಗಿ ಅವರಿಗೆ ಕಲಾಪವನ್ನು ಮುಂದೂಡದೆ ಅನ್ಯ ಮಾರ್ಗವಿರಲಿಲ್ಲ . ಆದರೆ, ಕಲಾಪವನ್ನು ಬಹಿಷ್ಕರಿಸುವ ಕಾಂಗ್ರೆಸ್ನ ಉತ್ಸಾಹ ಎಡಪಕ್ಷಗಳಿಗೆ ಹಾಗೂ ಸಮಾಜವಾದಿ ಪಕ್ಷದ ಸದಸ್ಯರಿಗೆ ಇಷ್ಟವಿದ್ದಂತಿರಲಿಲ್ಲ . ಅವರು ಸದನದಲ್ಲಿ ಚರ್ಚೆಗೆ ಸಿದ್ಧರಾಗಿದ್ದರು.
ರಾಜ್ಯಸಭೆ ಆರಂಭಗೊಂಡ 45 ನಿಮಿಷಗಳಲ್ಲೇ ಕೋಲಾಹಲದ ನಡುವೆ ಬುಧವಾರಕ್ಕೆ ಮುಂದೆ ಹೋಯಿತು. ಇದಕ್ಕೂ ಮುನ್ನ, ನ್ಯಾಯಾಂಗ ತನಿಖೆಗಾಗಿ ಸರ್ಕಾರ ಮುಂದಾಗಿದೆ ಹಾಗೂ ಸದನದಲ್ಲಿ ಎಲ್ಲಾ ರೀತಿಯ ಚರ್ಚೆಗಾಗಿ ನಾವು ಸಿದ್ಧರಿದ್ದೇವೆ ಎಂದು ವಿದೇಶಾಂಗ ಸಚಿವ ಜಸ್ವಂತ್ಸಿಂಗ್ ಪ್ರಕಟಿಸಿದರು. ತಪ್ಪು ಮಾಡಿದವರನ್ನು ಶಿಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಸದಸ್ಯರು ಸಂಸದೀಯ ಸಮಿತಿಯ ತನಿಖೆಗೇ ಪಟ್ಟು ಹಿಡಿದು ಗಲಭೆ ಮಾಡಿದ್ದರಿಂದ ಸಭಾನಾಯಕ ಕೃಷ್ಣಕಾಂತ್ ಸದನವನ್ನು ಮುಂದೂಡಿದರು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications