ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೋ-ಮಾಂ-ಚ-ನ-ದ ಹಿಂದಿ-ನ ನೋವ ಸೆಳ-ಕು-ಗ-ಳು
ಮೊದಲ ಮಳೆಯ ರೋಮಾಂಚನದ ಸುದ್ದಿಗಳನ್ನು ಖುಷಿಯಿಂದ ಹೇಳುತ್ತಿದ್ದ ನಾವು ಮೊದಲ ಮಳೆಯ ಅವಾಂತರಗಳನ್ನೂ ಹೇಳಲೇಬೇಕಿದೆ. ಉಡುಪಿಯಲ್ಲಿ ಸುರಿದ ಮಳೆ ಜನರಿಗೆ ಸಂತೋಷ ತಂದಿದೆ. ಇತ್ತೀಚೆಗೆ ಉಡುಪಿಯಲ್ಲಿ ತಾಪಮಾನ ಯದ್ವಾತದ್ವಾ ಏರಿತ್ತು . ಆ ಕಾರಣದಿಂದಾಗಿ, ಸುರಿದ ಮಳೆ ಸಂತೋಷ ತಂದರೂ ಅದೇ ಮಳೆಯಿಂದಾಗಿ ನೊಂದವರೂ ಇದ್ದಾರೆ. ಸಿಡಿಲ ಹೊಡೆತಕ್ಕೆ ಮಂಗಳವಾರ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಮಳೆ ಹೊಡೆತದಿಂದ ಕುಸಿದ ಮನೆಯಿಂದಾಗಿ ಇಬ್ಬರು ಗಾಯಗೊಂಡಿದ್ದಾರೆ.
ಉಳಿದಂತೆ, ರಾಜ್ಯದ ಕೆಲವು ಪ್ರದೇಶಗಳಲ್ಲಿ ವಿರಳವಾಗಿ ಮಳೆಯಾದದ್ದು ಹೊರತುಪಡಿಸಿದರೆ ಒಣಹವೆ ಮುಂದುವರಿದಿದೆ. ಬೆಂಗಳೂರಿನಲ್ಲಿ ನೆಲಮಟ್ಟದ ತಂಪುಗಾಳಿ. ಮಧ್ಯಾಹ್ನ ಇನ್ನೇನು ಮಳೆ ಸುರಿದೇ ಬಿಟ್ಟಿತು ಎನ್ನುವ ವಾತಾವರಣ ಕಾಣಿಸಿಕೊಂಡರೂ, ಕಾಣಿಸಿಕೊಂಡದ್ದು ಒಂದೆರಡು ಹನಿ ಮಾತ್ರ.
ಗುರುವಾರ, ರಾಜ್ಯದ ಆಕಾಶದಲ್ಲಿ ಗಮನಾರ್ಹ ಬದಲಾವಣೆಗಳೇನೂ ಇರುವುದಿಲ್ಲ ಎಂದಿದೆ ಹವಾಮಾನ ಇಲಾಖೆಯ ವರದಿ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ. ಸಂಜೆ ಅಥವಾ ರಾತ್ರಿ ವೇಳೆ ತುಂತುರಿನ ನಿರೀಕ್ಷೆ .
Comments
Story first published: Wednesday, April 11, 2001, 5:30 [IST]