Get Updates
Get notified of breaking news, exclusive insights, and must-see stories!

ಶರಣರಿಗೆ ದ್ರೋಹ ಬಗೆದ ಮಾತೆಮಹಾದೇವಿಗೆ ಬಹಿಷ್ಕಾರ ಹಾಕಿ

ಹುಬ್ಬಳ್ಳಿ : ಶಿವ ಶರಣರ ವಚನಗಳ ನಾಮಾಂಕಿತವನ್ನು ಬದಲಾಯಿಸಿ ಶರಣ ತತ್ವಕ್ಕೆ ಅಪಚಾರವೆಸಗುತ್ತಿರುವ ಬಸವ ಧರ್ಮ ಪೀಠದ ಅಧ್ಯಕ್ಷೆ , ಮಾತೆ ಮಹಾದೇವಿ ಅವರಿಗೆ ವೀರಶೈವ ಧರ್ಮ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಸಾಹಿತಿಗಳು, ರಾಜಕೀಯ ನಾಯಕರು ಮತ್ತು ಧಾರ್ಮಿಕ ಮುಖಂಡರ ಸಭೆ ನಿರ್ಧರಿಸಿದೆ.

ಧಾರವಾಡದಲ್ಲಿ ಸೋಮವಾರ ನಡೆದ ಸಭೆಯಲ್ಲಿ , ಅಕ್ಕ ಮಹಾದೇವಿಯ ವಚನಗಳ ಅಂಕಿತವನ್ನು ಮಾತೆ ಮಹಾದೇವಿ ಬದಲಾಯಿಸಿರುವುದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗಿದ್ದು , ಇದು ಕನ್ನಡ ಸಾರಸ್ವತ ಲೋಕಕ್ಕೆ ಬಗೆದ ಅಪಚಾರ. ಪ್ರಚಾರಕ್ಕಾಗಿ ವಚನಾಂಕಿತವನ್ನು ಬದಲಾಯಿಸುವ ಮಾತೆ ಮಹಾದೇವಿ ಶಿಕ್ಷೆಗೆ ಅರ್ಹರು ಎಂದು ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಟೀಕಿಸಿದರು.

ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದ ವಚನಗಳ ಅಂಕಿತವನ್ನು ತಿದ್ದುವ ಅಪರಾಧವನ್ನು ಮಾತೆ ಮಹಾದೇವಿ ಅವರು ಕಳೆದ ಐದಾರು ದಶಕಗಳಿಂದ ಮಾಡುತ್ತಲೇ ಬಂದಿದ್ದಾರೆ ಎಂದು ಸಾಹಿತಿ ಚೆನ್ನವೀರ ಕಣವಿ ಆಪಾದಿಸಿದರು.

ಮಾತೆ ಮಹಾದೇವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಗಲಕೋಟೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಶಾಂತಾದೇವಿ ಮಾಳವಾಡ ಅಭಿಪ್ರಾಯಪಟ್ಟರೆ, ಮಹಾದೇವಿ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಸಲ್ಲಿಸಬೇಕು ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು.

ಡಾ. ಗುರುಲಿಂಗ ಕಾಪಸೆ, ಡಾ. ಶಾಂತಕ್ಕ ಇಮ್ರಾಪುರ, ಡಾ. ವೀರಣ್ಣ ರಾಜೂರ, ಡಾ. ಚೆನ್ನಕ್ಕ ಪಾವಟೆ, ಹೊಸ ಮಠದ ಚಂದ್ರಶೇಖರ ಸ್ವಾಮೀಜಿ, ಮುರುಘಾ ಮಠದ ಶಿವಯೋಗಿ ಸ್ವಾಮೀಜಿ ಮತ್ತಿತರ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+