ರಾಜ್ ಅಪಹರಣದ ಸತ್ಯಾಂಶಗಳೇನು ? ನಿರೀಕ್ಷಿಸಿಅಬ್ದುಲ್ ಕರೀಂ ಪುಸ್ತಕ
ಬೆಂಗಳೂರು : ರಾಜ್ ಅಪಹರಣ ಪ್ರಕರಣದ ಬಿಸಿ ಆರಿ ತಿಂಗಳುಗಳಾಗಿದ್ದರೂ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳು ಅಪಹರಣ ಪ್ರಕರಣದ ಹಿಂದಿರುವ ಸತ್ಯವನ್ನು ಬಯಲು ಮಾಡಲು ಪಣ ತೊಟ್ಟಿರುವಂತಿದೆ. ಮಾಜಿ ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಅವರು, ರಾಜ್ ಅಪಹರಣದ ಸತ್ಯಗಳನ್ನು ಜನರಿಗೆ ತಿಳಿಸಲು ಪುಸ್ತಕವೊಂದನ್ನು ಬರೆಯುತ್ತಿದ್ದರೆ, ಇತ್ತ ಮೃತ ಪೊಲೀಸ್ ಇನ್ಸ್ಪೆಕ್ಟರ್ ಶಕೀಲ್ ಅಹ್ಮದ್ ತಂದೆ, ಮಾಜಿ ಪೊಲೀಸ್ ಮಹಾ ನಿರೀಕ್ಷಕ ಅಬ್ದುಲ್ ಕರೀಂ ಕೂಡ ರಾಜ್ ಅಪಹರಣಕ್ಕೆ ಸಂಬಂಧಿಸಿದಂತೆ ವೀರಪ್ಪನ್ ಬಗ್ಗೆ ಪುಸ್ತಕವನ್ನು ಬರೆಯುತ್ತಿದ್ದಾರೆ.
ವೀರಪ್ಪನ್, ಟಾಡಾದಡಿ ಬಂಧಿತರಾಗಿದ್ದ ಮೈಸೂರು ಜೈಲಿನ ಕೈದಿಗಳ ಬಿಡುಗಡೆಯ ಬೇಡಿಕೆಯನ್ನಿಟ್ಟಾಗ ಅಬ್ದುಲ್ ಕರೀಂ ಅವರು ತೀವ್ರವಾಗಿ ಪ್ರತಿಭಟಿಸಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಕೆಳ ನ್ಯಾಯಾಲಯಗಳಲ್ಲಿ ಗೆಲುವು ಕಾಣದ ಅವರು ಸವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಜಯ ಕಂಡಿದ್ದರು.
ಪ್ರಸ್ತುತ, ಅಬ್ದುಲ್ ಕರೀಂ ಅವರು ಬರೆಯುವ ಪುಸ್ತಕದಲ್ಲಿ ವೀರಪ್ಪನ್ ಪರವಾಗಿ ನಡೆದಿರುವ ಲಾಬಿ, ಗಂಧದ ಕಳ್ಳ ಸಾಗಾಣಿಕೆ, ಕಲ್ಲು ಗಣಿ ಗುತ್ತಿಗೆದಾರರು ಮತ್ತು ರಾಜ್ಕುಮಾರ್ ಅಭಿಮಾನಿ ಬಳಗ ಅಲ್ಲದೆ ತಮಿಳು ಉಗ್ರಗಾಮಿಗಳ ಕುರಿತು ಬೆಳಕು ಚೆಲ್ಲಲಿದ್ದಾರೆ.
ಅಬ್ದುಲ್ ಕರೀಂ ಅವರ ಪುಸ್ತಕ ಈ ಬಾರಿಯ ಸ್ವಾತಂತ್ರೋತ್ಸವದ ಮುನ್ನಾ ದಿನ ಬಿಡುಗಡೆಯಾಗಲಿದೆ. ಅಂದಿಗೆ ಅವರ ಪುತ್ರ ಶಕೀಲ್ , ವೀರಪ್ಪನ್ ಗುಂಡಿಗೆ ಬಲಿಯಾದ ದುರಂತಕ್ಕೆ 8 ವರ್ಷ ತುಂಬುತ್ತದೆ. ರಾಜ್ ಅಪಹರಣ ಪ್ರಕರಣದ ಎಲ್ಲ ಘಟನೆಗಳು ಅನುಕ್ರಮವಾಗಿ ಪುಸ್ತಕದಲ್ಲಿ ಉಲ್ಲೇಖವಾಗಿರುತ್ತವೆ. ಅಪಹರಣ, ವೀರಪ್ಪನ್ ಬೇಡಿಕೆಗಳು, ಸರಕಾರದ ಪ್ರತಿಕ್ರಿಯೆ , ಟಾಡಾ ಬಂಧಿಗಳ ಬಿಡುಗಡೆಯ ನಿರ್ಧಾರಕ್ಕೆ ಬಂದ ಪ್ರತಿಕ್ರಿಯೆಗಳು... ಹೀಗೆ ಸಾಗುತ್ತದೆ ಪುಸ್ತಕ. ಪುಸ್ತಕ ಒಂದು ದಾಖಲೆಯಾಗಿರುತ್ತದೆ ಎಂದು 78ರ ಹುಮ್ಮಸ್ಸಿನ ಕರೀಂ ಹೇಳುತ್ತಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications