Get Updates
Get notified of breaking news, exclusive insights, and must-see stories!

ಇತಿಹಾಸ ತಜ್ಞ ಸೂರ್ಯನಾಥ ಕಾಮತರಿಗೊಲಿದ ಪರಶುರಾಮ

ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಪ್ರಥಮ ಪರಶುರಾಮ ಪುರಸ್ಕಾರ ಸಂಶೋಧಕ, ಇತಿಹಾಸತಜ್ಞ ಡಾ. ಸೂರ್ಯನಾಥ ಕಾಮತ್‌ ಅವರಿಗೆ ಸಂದಿದೆ.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸೂರ್ಯನಾಥ ಕಾಮತ್‌ ಅವರಿಗೆ ಶಾಲು ಹೊದಿಸಿ, ಪ್ರಶಸ್ತಿ ಪತ್ರ ನೀಡುವುದರ ಜೊತೆಗೆ ಕೈಗೆ ಚಿನ್ನದ ಕಡಗ ತೊಡಿಸಿ ಮಾಜಿ ಸಚಿವ ಜಯ ಪ್ರಕಾಶ್‌ ಹೆಗ್ಡೆ ವಿಶೇಷ ರೀತಿಯಲ್ಲಿ ಸನ್ಮಾನಿಸಿದರು, ಅಭಿನಂದಿಸಿದರು.

ಸಂಶೋಧಕರು ಮತ್ತು ಇತಿಹಾಸತಜ್ಞರು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಕಾಮತರನ್ನು ಸನ್ಮಾನಿಸಿದ ಜಯಪ್ರಕಾಶ್‌ ಹೆಗ್ಡೆ ಹೇಳಿದರು. ಅನೇಕ ಉನ್ನತ ಹುದ್ದೆಗಳನ್ನು ಅಂಕರಿಸಿದ್ದರೂ ಸೂರ್ಯನಾಥ ಕಾಮತರು ಸರಳ ಸ್ವಭಾವವನ್ನೇ ಮೈಗೂಡಿಸಿಕೊಂಡಿದ್ದಾರೆ ಎಂದು ಅಭಿನಂದನಾ ಭಾಷಣ ಮಾಡಿದ ಕೇಶವ ಭಟ್‌ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಮತರು, ಸಾಮಾನ್ಯ ಮನುಷ್ಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ, ಶ್ರೀಮಂತರನೇಕರು ಸ್ವಾತಂತ್ರ್ಯ ಸಂಗ್ರಾಮದಿಂದ ದೂರ ಉಳಿದಿದ್ದರು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಎಚ್‌. ಎನ್‌. ಶ್ರೀಧರ್‌, ಸಂಘದ ಉಪಾಧ್ಯಕ್ಷ ಪಿ.ಜೆ. ಬಾಗಿಲ್ತಾಯ ಉಪಸ್ಥಿತರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+