ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಲ ಊದಿಸಿಕೊಂಡಿರುವ ದ್ರಾವಿಡ್‌ ಮೂರನೇಪಂದ್ಯಕ್ಕೆ ಅನುಮಾನ

By Staff
|
Google Oneindia Kannada News

ಪುಣೆ : ಗಲ್ಲಕ್ಕೆ ಪೆಟ್ಟು ಮಾಡಿಕೊಂಡಿರುವ ಭಾರತ ಕ್ರಿಕೆಟ್‌ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌, ಕಲಾತ್ಮಕ ಹೊಡೆತಗಳ ಆಟಗಾರ ರಾಹುಲ್‌ ದ್ರಾವಿಡ್‌ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಸೀಮಿತ ಓವರ್‌ಗಳ ಪಂದ್ಯದಲ್ಲಿ ಆಡುವುದು ಅನುಮಾನ .

ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾಕ್ಕೆ ಬಿಟ್ಟುಕೊಟ್ಟಿರುವ ಭಾರತ, ಮಾರ್ಚ್‌ 31 ರ ಶನಿವಾರ ಇಂದೋರ್‌ನಲ್ಲಿ ನಡೆಯುವ ಪಂದ್ಯದ ಮೂಲಕ ಮತ್ತೆ ಮುನ್ನಡೆ ಪಡೆಯಲು ತಹತಹಿಸುತ್ತಿದ್ದು , ಉತ್ತಮ ಫಾರ್ಮ್‌ನಲ್ಲಿರುವ ದ್ರಾವಿಡ್‌ ಆಡದಿದ್ದರೆ ತಂಡದ ಆತ್ಮ ವಿಶ್ವಾಸಕ್ಕೆ ಪೆಟ್ಟು ಬೀಳುವುದು ಖಚಿತ.

ಬುಧವಾರ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ದ್ರಾವಿಡ್‌ ಗಾಯಗೊಂಡಿದ್ದು ಅವರ ಗಲ್ಲ ಊದಿಕೊಂಡಿದೆ. ಅವರನ್ನು ತೀವ್ರ ನಿಗಾದಲ್ಲಿ ಇಡಲಾಗಿದ್ದು , ಊತ ಇಳಿಯದಿದ್ದಲ್ಲಿ ಶನಿವಾರದ ಪಂದ್ಯದಲ್ಲಿ ದ್ರಾವಿಡ್‌ ಕೇವಲ ಪ್ರೇಕ್ಷಕರಾಗಿರುತ್ತಾರೆ ಎಂದು ತಂಡದ ಕೋಚ್‌ ಜಾನ್‌ ರೈಟ್‌ ತಿಳಿಸಿದ್ದಾರೆ.

ಮೊದಲ ಪಂದ್ಯದ ಗೆಲುವಿನ ರೂವಾರಿ ವೀರೇಂದ್ರ ಶೆಹ್ವಾಗ್‌ ಸೇವೆಯನ್ನು ಕಳಕೊಂಡಿರುವ ಭಾರತ ತಂಡವೀಗ ದ್ರಾವಿಡ್‌ ಸೇವೆ ಕಳಕೊಳ್ಳುವ ಆತಂಕ ಎದುರಿಸುತ್ತಿರುವುದರಿಂದ, ದ್ರಾವಿಡ್‌ ಬದಲಿಗೆ ಯಾರನ್ನು ಆಡಿಸಬೇಕೆಂದು ತಂಡದ ಚಿಂತಕರ ಚಾವಡಿ ತಲೆ ಕೆಡಿಸಿಕೊಳ್ಳುತ್ತಿದೆ. ಬದಲಾಗಿ ಮತ್ತೆ ಗೆಲುವಿನ ಲಹರಿ ಕಂಡುಕೊಂಡಿರುವ ಕಾಂಗರೂಗಳು ತಮ್ಮ ವಿಜಯೋತ್ಸವ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ.

(ಪಿಟಿಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X