ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರಧಾನಿ ವಾಜಪೇಯಿ ರಾಜೀನಾಮೆನೀಡಬೇಕಾಗಿಲ್ಲ -ಹೆಗಡೆ
ಹುಬ್ಬಳ್ಳಿ : ತೆಹಲ್ಕಾ ಡಾಟ್ ಕಾಮ್ ಬಹಿರಂಗಪಡಿಸಿದ ರಕ್ಷಣಾ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ವಾಜಪೇಯಿ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ, ಸಂಯುಕ್ತ ಜನತಾದಳದ ರಾಮಕೃಷ್ಣ ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು, ತೆಹಲ್ಕಾ ಹಗರಣದಲ್ಲಿ ಪ್ರಧಾನಿ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆ ದೊರಕಿಲ್ಲ. ಈ ಹಗರಣದ ನೆಪದಲ್ಲಾದರೂ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರ ಪುನರ್ವಿಮರ್ಶೆ ಮಾಡಿಕೊಳ್ಳಬೈಕು ಎಂದು ಹೇಳಿದರು. ಸಂಯುಕ್ತ ಸರಕಾರಕ್ಕೆ ವಾಜಪೇಯಿಯೇ ಸೂಕ್ತ ಮುಂದಾಳು ಎಂದ ಹೆಗಡೆ ಇತ್ತೀಚೆಗೆ ಎನ್ಡಿಎ ಸಭೆಯಲ್ಲಿ ಭಾಗವಹಿಸದೇ ಇರುವುದಕ್ಕೆ ವೈಯಕ್ತಿಕ ಕಾರಣಗಳೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
(ಯುಎನ್ಐ)
(ಪಿಟಿಐ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Saturday, March 24, 2001, 5:30 [IST]