ಬೊಮ್ಮೇನಹಳ್ಳೀಲಿ ಮಲೇರಿಯಾಕಾಟವೋ ಕಾಟ, ಕಿಂದರಿಜೋಗಿ ಎಲ್ಲಿ ?
ಹೊಸದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿರುವ ಬೊಮ್ಮೇನಹಳ್ಳಿಗೆ ಈ ವರ್ಷ ಬಂದಿರುವುದು ಎಂದಿನಂಥಾ ಬೇಸಗೆಯಲ್ಲ , ಸುಡು ಬೇಸಗೆ. ಬಂದ ಬೇಸಗೆ ಬರಿಗೈನಲ್ಲಿ ಬರಲಿಲ್ಲ , ಮಲೇರಿಯಾವನ್ನೂ ಕರಕೊಂಡು ಬಂದಿದೆ.
ಬೆಂಗಳೂರಿನ ಯಾವುದೋ ಬಡಾವಣೆಯ ಕಿರಿದಾದ ಕಿರಿಕಿರಿ ರಸ್ತೆಯಾಂದರ ಕಿಷ್ಕಿಂದೆಯಂಥಾ ಓಣಿಯಾಂದನ್ನು ಬೊಮ್ಮೇನಹಳ್ಳಿ ಹೋಲುತ್ತದೆ. 200 ಮನೆಗಳ ಪುಟ್ಟಗ್ರಾಮವಿದು. ಪ್ರತಿ ಮನೆಗೂ ಮಲೇರಿಯಾ ಪಾದಬೆಳೆಸಿದೆ. ಹಿರಿ ಕಿರಿಯರೆನ್ನುವ ಭೇದವಿಲ್ಲದೆ ಒಬ್ಬರಲ್ಲಾ ಒಬ್ಬರು ಜ್ವರದಿಂದ ಹಾಸಿಗೆಗೆ. ಸುಮಾರು ಒಂದು ತಿಂಗಳಿನಿಂದ ಊರನ್ನು ಕಾಡುತ್ತಿರುವ ಈ ಕಾಯಿಲೆಗೆ ಮೊನ್ನೆ ತಾನೇ 55 ವರ್ಷದ ವೃದ್ಧೆ ಬಲಿಯಾಗಿದ್ದಾರೆ.
ಪ್ರಸ್ತುತ, ಗ್ರಾಮದ ಕನಿಷ್ಠ 150 ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಅಂದಮಾತ್ರಕ್ಕೆ ಗ್ರಾಮ ಕೊಳಗೇರಿಯಂತಿದೆ ಎಂದೇನಲ್ಲ . ಸಾಕಷ್ಟು ಸ್ವಚ್ಛತೆಯ ಪಾಠ ಕಲಿತಿಕೊಂಡಿರುವ ಊರಿದು. ಎಲ್ಲ ಊರುಗಳಲ್ಲಿರುವಂತೆ ಇಲ್ಲೂ ಸೊಳ್ಳೆಗಳಿವೆ. ಇಷ್ಟಕ್ಕೂ ಬೊಮ್ಮೇನಹಳ್ಳಿಗೆ ಮಲೇರಿಯಾ ಹೊಸದೇನೂ ಅಲ್ಲ . 1993, 97 ರಲ್ಲಿ ಇಂಥದ್ದೇ ಪರಿಸ್ಥಿತಿ ಇತ್ತು . ನಾಲ್ಕು ವರ್ಷಗಳಿಗೊಮ್ಮೆ ಊರು ಮಲೇರಿಯಾಕ್ಕೆ ತುತ್ತಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸುತ್ತಲ ಮತ್ತೋಡು, ಗುಡ್ಡದ ನೇರಲಕೆರೆ, ತಂಡಗ, ಕಂಚಿಪುರ ಭಾಗಗಳಲ್ಲಿಯೂ ಮಲೇರಿಯಾ ಹಬ್ಬುತ್ತಿದೆ.
ಊರನ್ನು ಮಲೇರಿಯಾ ಕಾಡುತ್ತಿದ್ದರೂ, ಔಷಧಿಗಾಗಿ ಸಮೀಪದ ಬೆಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7 ಕಿಮೀ ದೂರವನ್ನು ಸವೆಸಬೇಕಾದ ಶೋಚನೀಯ ಸ್ಥಿತಿ ರೋಗಿಗಳದಾಗಿದೆ. ಸುತ್ತಮುತ್ತಲ ಏಳೆಂಟು ಹಳ್ಳಿಗರ ಅವಶ್ಯಕತೆಗಳನ್ನು ಪೂರೈಸಬೇಕಾದ ಸ್ಥಿತಿಯಲ್ಲಿರುವ ಬೆಲಗೂರು ಆಸ್ಪತ್ರೆಯಲ್ಲೂ ಮೂಲಭೂತ ಸೌಕರ್ಯಗಳು ಸಮರ್ಪಕವಾಗೇನೂ ಇಲ್ಲ .
ಇನ್ನು ಕೆಲವೇ ದಿನಗಳಲ್ಲಿ ಚಿಕ್ಕಮಗಳೂರು ಕಡೆ ಕಾಫಿ ತೋಟಕ್ಕೆ ಕೂಲಿಗೆ ಹೋದವರು ವಾಪಸ್ಸು ಬರುತ್ತಾರೆ. ಅವರೊಂದಿಗೆ ಮಲೇರಿಯಾ ಕೂಡ ಊರನ್ನು ಪ್ರವೇಶಿಸುತ್ತದೆ ಅನ್ನುತ್ತಾರೆ ಊರಿನ ಹಿರೀಕರು. ಅಲ್ಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಸದ್ಯಕ್ಕೆ ಬೊಮ್ಮೇನಹಳ್ಳಿ ಜನರಿಗೆ ಜರೂರಾಗಿ ಬೇಕಾಗಿರುವುದು ಚಿಕಿತ್ಸೆ . ಊರಿನಲ್ಲಿಯೇ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವುದರಿಂದ ರೋಗಿಗಳು ಏಳೆಂಟು ಕಿಮೀ ನಡೆಯುವುದು ತಪ್ಪುತ್ತದೆ. ಸಂಚಾರಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವುದು ಸಾಧ್ಯವಾದರೆ, ಸುತ್ತ ಮುತ್ತಲ ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications