ಮೈಸೂರು ಸೌಂದರ್ಯ ರಕ್ಷಣೆಗೆ ಫುಟ್ಪಾತ್ ಅಂಗಡಿಗಳ ನೆಲಸಮ
ನಾಗೇಂದ್ರಪ್ರಸಾದ್, ನಂಜನಗೂಡು
ಮೈಸೂರು : ಅರಮನೆಗಳ ಸುಂದರ ನಗರಿಯ ರಾಜಮಾರ್ಗಗಳ ಇಕ್ಕೆಲಗಳ ಪಾದಚಾರಿ ರಸ್ತೆಯನ್ನು ಫುಟ್ಪಾತ್ ಅಂಗಡಿಗಳು ಅಕ್ರಮಿಸಿಕೊಂಡು ನಗರದ ಸೌಂದರ್ಯವನ್ನೇ ಹಾಳು ಮಾಡಿವೆ. ಸಾಂಸ್ಕೃತಿಕ ರಾಜಧಾನಿಯ ಸೌಂದರ್ಯ ಕಾಪಾಡಲು ಈಗ ಮೈಸೂರು ನಗರ ಪಾಲಿಕೆ ಈ ಫುಟ್ಪಾತ್ ಅಂಗಡಿಗಳನ್ನು ನೆಲಸಮ ಮಾಡುವ ಕಾರ್ಯ ಆರಂಭಿಸಿದೆ.
ನಗರ ಸೌಂದರ್ಯಕ್ಕೆ ಫುಟ್ಪಾತ್ ಅಂಗಡಿಗಳು ಮಾರಕವಾಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಎಲ್ಲ ಫುಟ್ಪಾತ್ ಅಂಗಡಿ ಕೆಡವಲು ಪಾಲಿಕೆ ತೀರ್ಮಾನಿಸಿತ್ತು. ಭಾನುವಾರ ರಾತ್ರಿಯಿಂದಲೇ ಈ ಕಾರ್ಯಾಚರಣೆಯನ್ನು ಪಾಲಿಕೆ ಆರಂಭಿಸಿದೆ. ಈ ಕಾರ್ಯಚರಣೆಗೆ ಮೊದಲು ಬಲಿಯಾದದ್ದು ಟೈಟಾನಿಕ್ ಐಸ್ಕ್ರೀಮ್ ಪಾರ್ಲರ್.
ಹೇಳಿ ಕೇಳಿ ಅಂಗಡಿಯ ಹೆಸರೇ ಟೈಟಾನಿಕ್. ಇನ್ನು ಅದು ಮುಳುಗದಿರಲು ಸಾಧ್ಯವೇ? ಆಯುರ್ವೇದ ಕಾಲೇಜು ಮುಂಭಾಗದಿಂದ ಪಾದಚಾರಿ ರಸ್ತೆಗಳ ಆಕ್ರಮಿಸಿದ ಅಂಗಡಿ ನೆಲಸಮ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಕಾಕತಾಳೀಯ ಎಂಬಂತೆ ಮೊದಲು ಆಯ್ಕೆ ಮಾಡಿದ್ದು, ಟೈಟಾನಿಕ್ ಐಸ್ಕ್ರೀಂ ಅಂಗಡಿಯನ್ನು.
ಭಾನುವಾರ ರಾತ್ರಿ 11-30ರ ಸುಮಾರಿನಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಕಾರ್ಯಪಡೆ ತಂಡ ಅಂಗಡಿಗಳ ನೆಲಸಮ ಕಾರ್ಯ ಆರಂಭಿಸಿತು. ಮೈಸೂರು ನಗರಕ್ಕೆ ದೇಶ - ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಅಂಗಡಿಗಳಿಂದ ನಗರದ ಸೌಂದರ್ಯ ಹಾಳಾಗುವುದೇ ಅಲ್ಲದೆ, ಮೈಸೂರು ಪರಂಪರೆಗೂ ದಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಎ.ಕೆ. ಸುರೇಶ್ ತಿಳಿಸಿದ್ದಾರೆ.
ದೇವರಾಜಾ ಮಾರ್ಕೆಟ್ ಬಂದ್ : ನಗರದ ಪ್ರಮುಖ ರಸ್ತೆಗಳ ಫುಟ್ಪಾತ್ಗಳಲ್ಲಿ ನಡೆಯುತ್ತಿರುವ ತರಕಾರಿ ಮಾರಾಟದಿಂದಾಗಿ, ಪಾಲಿಕೆಗೆ ಸುಂಕ ಕಟ್ಟುವ ತಾವು ಭಾರಿ ನಷ್ಟ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿರುವ ದೇವರಾಜಾ ಮಾರುಕಟ್ಟೆಯ ಮಳಿಗೆ ಮಾಲಿಕರು, ಸೋಮವಾರ, ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಕೆ.ಆರ್. ವೃತ್ತದಿಂದ ನಗರ ಪಾಲಿಕೆವರೆಗೆ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸಿ, ನಾಕರಿಕರ ಗಮನ ಸೆಳೆದರು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಸೂಕ್ತ ಕ್ರಮದ ಭರವಸೆ ನೀಡಿ, ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications