Get Updates
Get notified of breaking news, exclusive insights, and must-see stories!

ಧರ್ಮ ವಿರೋಧಿಗಳ ನಿಗ್ರಹ ಅಗತ್ಯ - ಶೃಂಗೇರಿ ಶ್ರೀಗಳು

ಕುಂದಾಪುರ : ಧರ್ಮ ವಿರೋಧಿಗಳನ್ನು ನಿಗ್ರಹಿಸಿದಾಗ ಮಾತ್ರ ಧರ್ಮವನ್ನು ಸರಿಯಾಗಿ ಆಚರಿಸಲು ಸಾಧ್ಯ. ಧರ್ಮ ವಿರೋಧಿಗಳ ನಿಗ್ರಹಕ್ಕಾಗಿಯೇ ಭಗವಂತ ಅನೇಕ ಅವತಾರಗಳನ್ನು ಎತ್ತಿದ ಎಂದು ಶೃಂಗೇರಿ ಪೀಠದ ಭಾರತೀ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕಂದಾವರದ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇತ್ತೀಚೆಗೆ ಜರುಗಿದ ನೂತನ ಹೆಬ್ಬಾಗಿಲು ಹಾಗೂ ಸ್ವಾಗತ ಗೋಪುರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇವರುಗಳ ನಡುವೆ ಭೇದ ಕಲ್ಪಿಸುವುದು ಸರಿಯಲ್ಲ . ಯಾವುದೇ ಹೆಸರಿನಲ್ಲಿ ಆರಾಧಿಸಿದರೂ ಭಗವಂತ ಒಲಿಯುತ್ತಾನೆ ಎಂದು ಸ್ವಾಮೀಜಿ ಹೇಳಿದರು.

ದೇವಸ್ಥಾನಗಳಲ್ಲಿ ಭಕ್ತರು ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ. ಪ್ರಸ್ತುತ ನವೀಕರಣಗೊಂಡಿರುವ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನವು ಭಕ್ತರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯ ಎಂದ ಸ್ವಾಮಿಜಿ, ಈ ದೇವಸ್ಥಾನಕ್ಕೂ ಶೃಂಗೇರಿ ಸಂಸ್ಥಾನಕ್ಕೂ ಇದ್ದ ಪೂರ್ವ ಸಂಬಂಧವನ್ನು ತಿಳಿದು ಸಂತೋಷ ವ್ಯಕ್ತ ಪಡಿಸಿದರು.

ಇದಕ್ಕೂ ಮುನ್ನ , ಪೂರ್ಣಕುಂಭ ಸ್ವಾಗತ ಹಾಗೂ ವೇದ ಘೋಷಗಳ ಮೆರವಣಿಗೆಯಾಂದಿಗೆ ಸ್ವಾಮಿಯವರನ್ನು ದೇಗುಲಕ್ಕೆ ಕರೆ ತರಲಾಯಿತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+